
ಜೇವರ್ಗಿ:ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ರವಿವಾರ ಸಂಜೆ 7 ಗಂಟೆಗೆ ಶ್ರೀ ಷಣ್ಮುಖ ಶಿವಯೋಗಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಜೇವರ್ಗಿ ವತಿಯಿಂದ ಬಸವ ಚೇತನ ಪ್ರಶಸ್ತಿ ಪುರಸ್ಕಾರ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ದಿವ್ಯಾ ಸಾನಿದ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಸೊನ್ನ ವಹಿಸಿಕೊಂಡಿದರು ಕಾಂಗ್ರೆಸ ಪಕ್ಷದ ಹಿರಿಯ ಮುಖಂಡರು ಶಿವಲಾಲ ಸಿಂಗ್ ತಿವಾರಿ ಉದ್ಘಾಟಿಸಿದರು. ಮಾಜಿ ಶಾಸಕರು ದೊಡ್ಡಪ್ಪಗೌಡ ಪಾಟೀಲ ನರಿಬೋಳ ಪ್ರಶಸ್ತಿ ಪ್ರಧಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಜೆಡಿಎಸ್ ಮುಖಂಡ ವಿಜಯಕುಮಾರ ಹಿರೇಮಠ್ ವಹಿಸಿಕೊಂಡಿದ್ದರು. ಮುಖ್ಯ ಅಥಿತಿಗಳಾಗಿ ರಾಜಶೇಖರ್ ಸೀರಿ ಅಖಿಲಭಾರತ ವೀರಶೈವ ಲಿಂಗಾಯತ ಮಾಹಾಸಭಾ ಜೇವರ್ಗಿ ತಾಲೂಕ ಅಧ್ಯಕ್ಷರು, ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಪಿಎಸ್ಐ ಶಿವರಾಜ ಪಾಟೀಲ ಆಗಮಿಸಿದರು.
ಸಾಹಿತಿ ಸದಾನಂದ ಪಾಟೀಲ, ಸಿಪಿಐ ರವಿ ನೈಕೋಡಿ, ಪ್ರಾದ್ಯಾಪಕ ಡಾ. ಗಣಪತಿ ಸಿಣ್ಣೂರ,ಶಿವಪುತ್ರಪ್ಪಾ ಸಾಹು ಕೋರಿ,ಬಸವಕೇಂದ್ರದ ಶರಣಬಸವ ಕಲ್ಲಾ,ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ನೀಲಕಂಠ ಸಾಹು ಅವಂಟಿ,ಸಿದ್ದು ಸಾಹು ಅಂಗಡಿ,ಡಾ. ಮಹಮ್ಮದ್ ಯಾಸಿನ್,ರಾಜು ಪವಾರ, ಪ್ರಾಚಾರ್ಯರರಾದ ಅಂಜುಮ ಸಲ್ಮ, ಮೋಹಿನೋದಿನ ಇನಾಮ್ದಾರ್, ಮಹೆಬೂಬ್ ಪಟೇಲ್, ಶರಣು ಅವರಾದ, ಅರುಣ ರೆಡ್ಡಿ, ರವಿಚಂದ್ರ ಗುತ್ತೇದಾರ್, ಮಹಾನಂದ ಹುಗ್ಗಿ, ರಾಣೋಜಿ ಸುಬೇದಾರ್, ಶರಣು ಪಾಟೀಲ್, ಸಂಗಣ್ಣ ಹೂಗಾರ್, ಸಿದ್ದು ಅಂಕಸದೊಡ್ಡಿ,ಸಿದ್ದು ನರಿಬೋಳ,ಅವರಿಗೆ ಬಸವ ಚೇತನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಗಾಯಕರಾದ ಸುರೇಶ್ ಇಂಚೆಗೇರಿ,ಭರತ್ ರಾಜ್,ದೀಪಾ ಹಳಿಯಾಳ,ಕವಿತಾ ಚಲಗೇರಿ,ಕಲ್ಯಾಣಿ ಬೆಳಗಾವಿ, ಜೂನಿಯರ್ ರವಿಚಂದ್ರನ್ ಅವರಿಂದ ಹಾಸ್ಯ ರಸ ಮಂಜರಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವಿಜಯಕುಮಾರ್ ಕಲ್ಲಾ, ಶಿವಕುಮಾರ್ ಕಲ್ಲಾ, ಮಲ್ಲಿಕಾರ್ಜುನ್ ಬಿರಾದಾರ್, ಅನಿಲ್ ರಾಂಪುರೆ, ದೇವಾನಂದ, ಶ್ರೀ ಷಣ್ಮುಖ ಶಿವಯೋಗಿ ಸಂಸ್ಕೃತಿಕ ಟ್ರಸ್ಟ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.