ಸುದ್ದಿಮೂಲ ವಾರ್ತೆ ಮಾನ್ವಿ, ನ.28:
ಮಾನ್ವಿಿ ಪಟ್ಟಣದ ಕಲ್ಮಠದ ಪೂಜ್ಯ ಶ್ರೀ ವಿರೂಪಾಕ್ಷ ಶಿವಾಚಾರ್ಯ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆೆಯ ಸಭಾಂಗಣದಲ್ಲಿ ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯಶಿವಾಚಾರ್ಯ ಮಹಾಸ್ವಾಾಮಿಗಳ ಜನ್ಮದಿನ ಅಂಗವಾಗಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆೆ, ರಿಮ್ಸ್ ರಕ್ತ ಭಂಡಾರ, ಹೆಚ್,ಡಿ.ಎ್.ಸಿ.ಬ್ಯಾಾಂಕ್ ಸಹಯೋಗದಲ್ಲಿ ಗುರುವಾರ ರಕ್ತದಾನ ಶಿಬಿರ ಹಮ್ಮಿಿಕೊಳ್ಳಲಾಗಿತ್ತು.
ಆರಂಭದಲ್ಲಿ ಸ್ವಯಂ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆೆ ಚಾಲನೆ ನೀಡಿದ ತಾಲೂಕಾ ಆರೋಗ್ಯಾಾಧಿಕಾರಿ ಡಾ.ಶರಣಬಸವರಾಜಗೌಡ ಮಾತ ನಾಡಿ ಇದುವರೆಗೂ ರಕ್ತವನ್ನು ಕೃತಕವಾಗಿ ತಯಾರಿಸುವುದಕ್ಕೆೆ ವೈದ್ಯ ವಿಜ್ಞಾನ ಶಾಸದಿಂದ ಸಾಧ್ಯವಾಗಿಲ್ಲ. ಆದ್ದರಿಂದ ಪ್ರತಿ ಆರೋಗ್ಯ ವಂತ ಮನಷ್ಯನ ದೇಹದಲ್ಲಿರುವ 5 ರಿಂದ 6 ಲೀಟರ್ ರಕ್ತದಲ್ಲಿ 300 ಎಂ.ಎಲ್.ರಕ್ತವನ್ನು ದಾನವಾಗಿ ನೀಡುವುದರಿಂದ ಆರೋಗ್ಯದ ಮೇಲೆ ಯಾವ ಪರಿಣಾಮವು ಉಂಟಾಗುವುದಿಲ್ಲ. ಕೆಲವೇ ದಿನಗಳಲ್ಲಿ ರಕ್ತ ಮರು ಉತ್ಪತ್ತಿಿಯಾಗುತ್ತದೆ. ದಾನವಾಗಿ ನೀಡುವ ರಕ್ತದಿಂದ ಅತ್ಯವಸರ ಪರಿಸ್ಥಿಿತಿಯಲ್ಲಿರುವ ರೋಗಿಗಳ ಪ್ರಾಾಣವನ್ನು ಉಳಿಸಬಹುದಾಗಿದೆ ಎಂದು ಹೇಳಿದರು.
ರಕ್ತದಾನ ಶಿಬಿರದಲ್ಲಿ ಕಾಲೇಜಿನ ವಿದ್ಯಾಾರ್ಥಿಗಳು, ವೈದ್ಯರು, ಸಾರ್ವಜನಿಕರು ಸ್ವಯಂಪ್ರೇೇರಿತರಾಗಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಾಚಾರ್ಯ ಡಾ.ಜೀವನೇಶ್ವರಯ್ಯ, ಉಪ ಪ್ರಾಾಚಾರ್ಯ ಡಾ.ಸುಮಂಗಲಾ ಹೆಚ್.ಎಂ.ಉಮಾಶಂಕರ ಹೆಚ್.ಎಂ. ಡಾ.ಹಿರೇಮಠ, ಶಿವರಾಜ ಒಡೆರ್ಯ, ಹೆಚ್.ಡಿ.ಎ್.ಸಿ.ಬ್ಯಾಾಂಕ್ನ ಮಾನ್ವಿಿ ಶಾಖಾ ವ್ಯವಸ್ಥಪಕರಾದ ಸುದೀಪ್ ಸೌದ್ರಿಿ, ಕಾರ್ಯನಿರ್ವಹಕ ವ್ಯವಸ್ಥಾಾಪಕರಾದ ವೀರೇಶ, ರಿಮ್ಸ್ ರಕ್ತ ಭಂಡಾರದ ವೈದ್ಯರಾದ ಹಮ್ಮೀದ್ ಹುಸೇನ್ ಸೇರಿದಂತೆ ಕಾಲೇಜಿನ ವೈದ್ಯ ಉಪನ್ಯಾಾಸಕರು, ವೈದ್ಯ ವಿದ್ಯಾಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.