Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಕಿನ ಹಬ್ಬ ದೀಪಾವಳಿಗೆ ವ್ಯಾಪಾರ ಜೊರು

ಸುದ್ದಿಮೂಲ ವಾರ್ತೆ

ಹೊಸಕೋಟೆ, ನ 12 : ನಗರದ ಕೆ.ಆರ್ ರಸ್ತೆ,ಹೂಮಂಡಿ ಸರ್ಕಲ್, ಫ್ಲೈಓವರ್ ವರೆಗೂ ದೀಪಾವಳಿ ಹಬ್ಬಕ್ಕೆ ಅಂಗಡಿಗಳಲ್ಲಿ ಅಲಂಕಾರಿಕ ವಸ್ತುಗಳಾದ.ನೋಮುದಾರಗಳು, ಮಣ್ಣಿನಿಂದ ಮಾಡಿದ ದೀಪದ ಹಣೆತೆಗಳು,ಹೂವ್ವು ಹಣ್ಣುಗಳು ,ಬೂದಕುಂಬಳ ಕಾಯಿಗಳು,ಬಾಳೆ ಹಣ್ಣುಗಳ ರಾಶಿ ಕಂಡುಬಂತು.

ಹಬ್ಬ ಬಂದರೆ ಸಾಕು ಹೊಸಕೋಟೆಯಲ್ಲಿ ರಸ್ತೆಗಳೆಲ್ಲಾ ಜಾಮ್ ಜಾಮ್. ಸಾರ್ವಜನಿಕರು ವಾಹನಗಳನ್ನು ಚಲಾಯಿಸಲು ಹರಸಹಾಸ ಪಡಬೇಕು. ಆ ರೀತಿ ಟ್ರಾಫಿಕ್ ಜಾಮ್ ಆಗುತ್ತದೆ ಬೆಲೆ ಏರಿಕೆ ನಡುವೆಯೂ ಕೊಳ್ಳುವವರು ಭಾರಿ ಸಂಖ್ಯೆಯಲ್ಲಿ ಸೇರಿದ್ದು ವಿಶೇಷ. ಇದರಿಂದ ರಸ್ತೆಯೆಲ್ಲ ವ್ಯಾಪಾರದ ಅಂಗಡಿಗಳಿಂದ ಬಿಎಂಟಿಸಿ ಬಸ್ಸುಗಳ ಸಂಚಾರಕ್ಕೆ ಅಡೆತಡೆಯಾಗಿತ್ತು. ಈ ಸಮಸ್ಯೆಗೆ

ಶಾಶ್ವತ ಪರಿಹಾರ ರೂಪಿಸುವಲ್ಲಿ ನಗರಸಭೆ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಸಾರ್ವಜನಿಕರ ಅಳಲು.

ವ್ಯಾಪಾರಸ್ಥರಿಗೆ ಬೇರೆಡೆ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಕೆ.ಆರ್ ರಸ್ತೆ ಸಂಚಾರಕ್ಕೆ ಸುಗಮವಾಗುತ್ತದೆ ಅದನ್ನು ಬಿಟ್ಟು ರಸ್ತೆಯ ಎರಡು ಬದಿಯಲ್ಲಿ ವ್ಯಾಪಾರಕ್ಕೆ

ಅನುವು ಮಾಡಿಕೊಟ್ಟಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಕೆಲವು ಕಾರುಗಳು ಸಹ ಅರ್ಧ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿ ವ್ಯಾಪಾರ ಮಾಡಲು ಹೋಗುತ್ತಾರೆ. ಅದರಿಂದ ಇನ್ನು ಹೆಚ್ಚಿನ

ತೊಂದರೆ ಆಗಿದ್ದು, ಮುಂದಿನ ಹಬ್ಬ ಹರಿ ದಿನಗಳಲ್ಲಿ ಪೊಲೀಸ್ ಮತ್ತು ನಗರಸಭೆ ಅಧಿಕಾರಿಗಳು ಎಚ್ಚೆತ್ತಕೊಂಡು ಬದಲಿ ವ್ಯವಸ್ಥೆ ಮಾಡಿಕೊಡಬೇಕೆಂದು ಸ್ಥಳಿಯ ಸಾರ್ವಜನಿಕರ ಒತ್ತಾಯವಾಗಿದೆ.

ಇನ್ನು ಹಬ್ಬ ಮುಗಿದರೆ ಕಸದ ರಾಶಿಗಳನ್ನು ಕ್ಲೀನ್ ಮಾಡಲು ಎರಡು ಮೂರು ದಿನಗಳು ಬೇಕು. ಬೂದಗುಂಬಳಕಾಯಿ, ಬಾಳೆದಿಂಡುಗಳು ಉಳಿದ ಹೂಗಳನ್ನು ಅಲ್ಲಿಯೆ ಬಿಟ್ಟು ಹೋಗುವ ವ್ಯಾಪಾರಸ್ಥರುಗಳು. ಇದರಿಂದ ಅದು ಕೊಳೆತು ನಾರುವ ಸ್ಥಿತಿ ಬಂದಾಗ ನಗರಸಭೆಯ ಪೌರಕಾರ್ಮಿಕರು ಸ್ವಚ್ಚಗೊಳಿಸುತ್ತಾರೆ.

ಪಟಾಕಿ ಮಳಿಗೆಗಳು ಈ ಭಾರಿ ಕಡಿಮೆ ಇದೆ ಕಾರಣ ಸರ್ಕಾರಗಳು ತಂದಿರುವ ಕಾನೂನು ಹಸಿರು ಪಾಟಾಕಿ ಮಾತ್ರ ಹೊಡೆಯಬೇಕೆಂದು ಕಟ್ಟು ನಿಟ್ಟಾದ ಆದೇಶದಿಂದ ಪಾಟಾಕಿ ಮಳಿಗೆಗಳು ಹೆಚ್ಚಾಗಿ ನಗರದಲ್ಲಿ ಕಾಣಲಿಲ್ಲ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ