ಚಾಗಭಾವಿ: ಗ್ರಾ.ಪಂ.ಉಪಚುನಾವಣೆ ಕಾಶಪ್ಪ ಅವಿರೋಧ ಆಯ್ಕೆ ಸುದ್ದಿಮೂಲವಾರ್ತೆ ಸಿರವಾರ: ಫೆ.೧೭ ಸಮೀಪದ ಚಾಗಭಾವಿ ಗ್ರಾಮ ಪಂಚಾಯತ ವ್ಯಾಪ್ತಿಯ ಭಾಗ್ಯನಗರ ಕ್ಯಾಂಪ್ ಸದಸ್ಯರ ಒಂದು ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಗ್ರಾ.ಪಂ.ನೂತನ ಸದಸ್ಯರಾಗಿ ಕಾಶಪ್ಪ ತಂದೆ ಕೊರಿ ಹನುಮಂತ ನಾಯಕ ಭಾಗ್ಯನಗರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆಯ ಅಧಿಕಾರಿ ಬಿ.ರಾಜಾಖಾನ್ ಸಹಾಯಕ ಚುನಾವಣಾಧಿಕಾರಿ ಕೇಶವಪ್ಪ ತಿಳಿಸಿದರು. ಈ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು, ಬಸವರಾಜ ನಾಯಕ ನಿಧನರಾದ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ಉಪ ಚುನಾವಣೆ ನಡೆಯಿತು. ಒಟ್ಟು ಮೂರು ಜನರು ನಾಮಪತ್ರ ಸಲ್ಲಿಸಿದ್ದರು. ಸರಸ್ವತಿ ಗಂ ಬಸವರಾಜ, ಕರೆಪ್ಪ ತಂದೆ ತಿಮಯ್ಯ ಇಬ್ಬರು ನಾಮಪತ್ರ ಹಿಂಪಡೆದರು. ಕಾಶಪ್ಪ ನಾಯಕ ಆಯ್ಕೆಯಾದರು.
ನಾಮಪತ್ರ ಹಿಂಪಡೆಯಲು ಶುಕ್ರವಾರ ಕೊನೆಯ ದಿನವಾಗಿತು. ಕಾಂಗ್ರೆಸ್ ಮುಖಂಡರಾದ ಶರಣಪ್ಪನಾಯಕ ಗುಡದಿನ್ನಿ
ಮೂರು ಜನರ ಹಾಗೂ ಕ್ಯಾಂಪ್ ಮುಖಂಡರ ಸಭೆಯ ಮೂಲಕ ಮನವೊಲಿಸಿ ಎರಡು ನಾಮಪತ್ರ ಹಿಂಪಡೆದರು, ಇದರಿಂದ ಅವಿರೋಧ ಆಯ್ಕೆಗೆ ಕಾರಣಿಭೂತರಾದರು.
ಈ ಸಂದರ್ಭದಲ್ಲಿ ಎಂ.ಶ್ರೀನಿವಾಸ್, ಬಸವರಾಜ ನಾಯಕ ದಳಪತಿ, ಮಾರ್ಕಂಡಯ್ಯ, ಕೋಟೇಶ್ವರ ರಾವ್, ಗ್ರಾಮ ಪಂಚಾಯತಿ ಸದಸ್ಯ ಇಮಾಮ್ ಸಾಬ್, ಷಣ್ಮುಖ, ನರಸಪ್ಪ,ಕ ಹನುಮೇಶ ಅರುಣ, ಮುಸ್ತಾಪ್, ಎಂ. ರಾಘವುಲು, ರಾಮಲಿಂಗೇಶ್ವರ ರಾವ್, ರಾಜಾ ರಾಮ್, ಎಂ.ಆರ್.ಚೌದ್ರಿ, ಬಸವರಾಜ ಭಾಗ್ಯನಗರ, ಪಿ.ರಘುರಾಮ್, ಚಿದಾನಂದ ಶೆಟ್ಟಿ, ಹಮೀದಸಾಬ್, ಕರಿಯಪ್ಪ, ಶಿವರಾಜ, ಪಿ.ಪಟ್ಟಾಬಿ, ರೇವಣಸಿದ್ದಪ್ಪ, ಸತ್ಯನಾರಾಯಣ, ಸಬ್ಜಲಿಸಾಬ್, ಸೂರಿ ಬಾಬು, ನರಸಿಂಹಮೂರ್ತಿ, ಶ್ರೀನಿವಾಸ್, ವೀರಬಾಬು, ವಿ.ರಾಜು, ಎನ್.ನಾಗರಾಜ, ಮಂಜುನಾಥ, ರಂಗಪ್ಪ, ಸುರೇಶ, ಮಹಾದೇವ, ಎಂ.ರಾಮು ಸೇರಿದಂತೆ ಭಾಗ್ಯನಗರ ಕ್ಯಾಂಪ್, ಜಾಲಾಪೂರು, ಶಾಸ್ತ್ರಿ ಕ್ಯಾಂಪ್, ಕ್ಯಾಂಪ್ ನಿವಾಸಿಗಳು ಇದರು.