Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವಗುರು ಬಸವಣ್ಣ ಬದುಕಿನ ಚೈತನ್ಯ-ಮಹಾಂತಸ್ವಾಮೀಜಿ

 

ಸುದ್ದಿಮೂಲವಾರ್ತೆ
ಮುದಗಲ್ ಏ,೧೩: ಬದುಕು ಚೈತನ್ಯವಾಗಿರಲು ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೊಡಿಸಿಕೊಳ್ಳಬೇಕೆಂದು ತಿಮ್ಮಾಪೂರು ಕಲ್ಯಾಣಾಶ್ರಮ ಮಹಾಂತೇಶ್ವರಮಠದ ಪೂಜ್ಯರಾದ ಮಹಾಂತಸ್ವಾಮೀಜಿ ಬುಧುವಾರ ಹೇಳಿದರು.
ಪಟ್ಟಣದ ಕುಂಬಾರಪೇಟೆ ಬಸವೇಶ್ವರ ದೇವಸ್ಥಾನದ ನೂತನ ರಥೋತ್ಸವ, ಬಸವಣ್ಣನ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಜೀವನ ದರ್ಶನ ಆಧ್ಯಾತ್ಮ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಮುದಗಲ್ ಪಟ್ಟಣ ಜಾತಿ-ಮತ ಭೇದವಿಲ್ಲದೇ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ಸತ್ಕಾರದ ಸೇವಾಕಾಂಕ್ಷಿ ಮನೋಭಾವನೆ ಗುಣ ಮನುಷ್ಯನನ್ನು ಎತ್ತರಕ್ಕೆ ಬೆಳೆಯುತ್ತಾನೆ.

ವರ್ತಮಾನದಲ್ಲಿ ನಾವೆಲ್ಲರೂ ಹುಟ್ಟಿರುವುದೇ ಪುಣ್ಯ. ಭಗವಂತ ಪ್ರಾಣಿ-ಪಕ್ಷಿಗಳಿಗೆ ನೀಡದ ಅರಿವಿನ ಜ್ಞಾನವನ್ನು ಮನುಷ್ಯನಿಗೆ ಮಾತ್ರ ಕಲ್ಪಿಸಿದ್ದಾನೆ. ಶಿವಸಮಯವನ್ನು ಬಹಳ ಜಾಗೃತಿಯಿಂದ ಸುಂದರವಾಗಿ ಬಳಸಿಕೊಂಡು ಬದುಕಬೇಕು. ಸಂತೆಕೆಲ್ಲೂರು ಘನಮಠ ಶರಣರು ಅತ್ಯಂತ ಮಹತ್ವವಾದ ವಿಚಾರಗಳನ್ನು ನಾಡಿಗೆ ನೀಡಿದ್ದಾರೆ. ದೇಶದ ಸಂಸ್ಕೃತಿ, ಸಂಪ್ರದಾಯದಲ್ಲಿ ನಮ್ಮ ಹಿರಿಯರು ಮಹಿಳೆಯರಿಗೆ ಎತ್ತರದ ಸ್ಥಾನ ಕೊಟ್ಟಿದ್ದಾರೆ. ಸಮಾಜದಲ್ಲಿ ಕೇಳುವವರಿಗಿಂತ, ಹೇಳುವವರೇ ಹೆಚ್ಚಾಗಿದ್ದಾರೆ. ಇಂತಹ ವಾತಾವರಣ ಮುಂದೆ ಸಮಾಜಕ್ಕೆ ಮಾರಕ ಎಂದರು.

ಮುದಗಲ್ಲಿನ ಇತಿಹಾಸದಲ್ಲಿ ಬಹಳಷ್ಟು ಮಹತ್ವವಿದೆ. ಅದರಂತೆ ನದಿಯಲ್ಲಿ ಹಡಗು, ಆಹಾರದಲ್ಲಿ ಸ್ವಾದ, ಶರೀರದಲ್ಲಿ ಕಾಲು, ಸಂಗೀತದಲ್ಲಿ ಸ್ವರ, ಪ್ರವಚನದಲ್ಲಿ ಕೇಳುವ ಶ್ರದ್ಧೆ, ಪೂಜೆಯಲ್ಲಿ ಉತ್ತಮ ಭಾವನೆ, ಕೊರಳಲ್ಲಿ ಹಾರ, ಮನೆಯಲ್ಲಿ ಪ್ರೀತಿಯಿಂದಿರುವ ವಿಷಯಗಳಿಗೆ ಬಹಳ ಮಹತ್ವವಿರುತ್ತದೆ ಎಂದು ಹೇಳಿದರು.
ಪ್ರವಚನದ ವೇದಿಕೆಗೆ ಘನಮಠದ ಗುರುಬಸವ ಸ್ವಾಮೀಜಿ ಹಾಗೂ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿಗಳನ್ನು ಭಕ್ತರು ಆರತಿ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕರೆದ್ಯೊದ್ದರು.

ಜೀವನ ದರ್ಶನ ಆದ್ಯಾತ್ಮ ಪ್ರವಚನ ಕಾರ್ಯಕ್ರಮ ಸಂತೆಕೆಲ್ಲೂರು ಘನಮಠದ ಗುರುಬಸವ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನಾ ಮಾಡಿದರು. ಕೆಲವರನ್ನು ವೇದಿಕೆಯಲ್ಲಿ ಸನ್ಮಾನಿಸಿದರು.
ಹಿರಿಯರಾದ ಗುರುಬಸಪ್ಪ ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ನಿರೂಪಣೆ ಶಿಕ್ಷಕ ಮಂಜುನಾಥ ಗಡದಮಠ ನಿರ್ವಹಿಸಿದರು.
ವೀರಶೈವ ಸಮಾಜದ ಅಧ್ಯಕ್ಷ ಸುರೇಶಗೌಡ ಪಾಟೀಲ್ ಆದಾಪೂರು, ವೀರಭದ್ರಯ್ಯ ಸ್ವಾಮೀ ಸರಗಣಾಚಾರಿ, ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಪ್ಪ ಮಾಟೂರು, ಶಿವಪ್ಪ ಸುಂಕದ, ಸಿದ್ದಯ್ಯಸ್ವಾಮೀ ಸಾಲಿಮಠ, ಮಹಾಂತೇಶ ಪಾಟೀಲ್, ವಿರುಪಾಕ್ಷಪ್ಪ ನಾಗಲಿಕರ್ ಹಾಗೂ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಮಹಿಳಾ ಸಮಿತಿಯರು, ಯುವಕರು, ದೇವಸ್ಥಾನದ ಭಕ್ತರು ಇದ್ದರು.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ