Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸುಗ್ಗಿಯ ಹಬ್ಬ ಎಳ್ಳ ಅಮವಾಸ್ಯೆ ಜಮೀನಿನಲ್ಲಿ ಚರಗ ಚೆಲ್ಲಿ ರೈತರ ಸಂಭ್ರಮ

 ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಡಿ.20:
ಎಳ್ಳು ಅಮವಾಸ್ಯೆೆ ಎಂದರೆ ರೈತರಿಗೆ ಎಲ್ಲಿಲ್ಲದ ಸಂಭ್ರಮ. ಹೊಲದಲ್ಲಿ ಹುಲುಸಾಗಿ ಬೆಳೆದ ಬೆಳೆಗೆ ಎಳ್ಳ ಅಮವಾಸ್ಯೆೆಯಂದು ಆಹಾರ ಪದಾರ್ಥ ಚರಗ ಚೆಲ್ಲಿ ಸಹಪರಿವಾರ ಸಮೇತರಾಗಿ ಊಟ ಸವಿದು ಸಂಭ್ರ ಮಿಸುವುದು ಈ ದಿನದ ವಿಶೇಷ ಆಚರಣೆಯಾಗಿದೆ.
ಹಿಂಗಾರು ಬೆಳೆಗಳಾದ ಜೋಳ, ಕಡಲೆ, ಕುಸುಬೆ, ಗೋದಿ ಈ ಬಾರಿ ಹುಲುಸಾಗಿ ಬೆಳೆದಿದ್ದು ಹಿಂಗಾರು ಬೆಳೆ ಚೆನ್ನಾಾಗಿ ಬರಲೆಂದು ಭೂಮಿತಾಯಿಗೆ ಪೂಜೆ ಸಲ್ಲಿಸುತ್ತಾಾರೆ. ಹೊಲದಲ್ಲಿ ಬನ್ನಿಿಗಿಡ ಅಥವಾ ಇನ್ನಾಾವುದೊ ಮರದ ಕೆಳಗೆ ಪಾಂಡವರ ಕಲ್ಲುಗಳನ್ನಿಿಟ್ಟು ಅವರಿಗೆ ನೈವೇದ್ಯ ಮಾಡಿ ಪೂಜೆ ಸಲ್ಲಿಸುವ ಮನೆಯಿಂದ ತಂದ ಸಿಹಿ ಸಮೇತ ಆಹಾರ ಪದಾರ್ಥಗಳನ್ನು ಜಮೀನಿನ ಸುತ್ತಲು ಚರಗ ಚೆಲ್ಲುವ ಪದ್ದತಿ ಹಿಂದಿನಿಂದಲೂ ರೂಢಿಯಲ್ಲಿದ್ದು ನಮಗೆ ಅನ್ನ ನೀಡುವ ಭೂತಾಯಿಗೆ ಊಣಬಡಿಸುವ ಈ ಕಾರ್ಯಕ್ರಮ ರೈತರಿಂದ ಎಲ್ಲೆೆಡೆ ನಡೆಯುತ್ತದೆ.
ಅಂತೆಯೇ ತಾಲೂಕಿನ ಸರ್ಜಾಪೂರ, ಹೊನ್ನಳ್ಳಿಿ, ಯರಡೋಣಿ ಮೇದಿನಾಪುರ, ಕೋಠಾ ಆನೆಹೊಸೂರು ಮಾವಿನಬಾವಿ ಸೇರಿ ಎಲ್ಲೆೆಡೆ ರೈತರು ಬೆಳಗಿನಿಂದಲೆ ಎಳ್ಳುಹೋಳಿಗೆ ಚಿತ್ರಾಾನ್ನ ಬಗೆಬಗೆಯ ಊಟದ ತಿನಿಸು ಮಾಡಿಕೊಂಡು ಬುತ್ತಿಿ ಕಟ್ಟಿಿಕೊಂಡು ಎಲ್ಲರೂ ಹೊಸಬಟ್ಟೆೆ ಧರಿಸಿ ಎತ್ತಿಿನಗಾಡಿ, ಟ್ರ್ಯಾಾಕ್ಟರ್, ಕಾಲುನಡಿಗೆ ಮೂಲಕ ತಮ್ಮ ತಮ್ಮ ಹೊಲಕ್ಕೆೆ ಕುಟುಂಬ ಸಮೇತ ಆಗಮಿಸಿ ಭೂ ದೇವಿಗೆ ಪೂಜೆ ಸಲ್ಲಿಸಿ ಬಂಧು ಬಾಂಧವರ ಸ್ನೇಹಿತರ ಜತೆ ಎಲ್ಲರೂ ಒಂದೆಡೆ ಕುಳಿತು ಸಹಭೋಜನ ಮಾಡುವುದು ಸಾಮಾನ್ಯವಾಗಿ ಕಂಡು ಬಂತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ