ಕೊಪ್ಪಳ ಶಾಸಕರ ಭಾವಚಿತ್ರವಿರುವ ಗಡಿಯಾರಗಳ ಸರಿ ಇಲ್ಲ
ಸುದ್ದಿಮೂಲವಾರ್ತೆ
ಕೊಪ್ಪಳ,ಆ.8:ಕೊಪ್ಪಳ ನಗರದಲ್ಲಿಯ ಹೆದ್ದಾರಿಯಲ್ಲಿಯ ಟೈಂ ಸರಿ ಇಲ್ಲ. ಗಡಿಯಾರಗಳು ದಿಕ್ಕು ತಪ್ಪಿಸುವಂತಾಗುತ್ತಿದೆ. ನಗರಸಭೆಯ ನಿರ್ಲಕ್ಷ್ಯ ಇದೊಂದು ಸಾಕ್ಷಿಯಾಗಿದೆ.
ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಒಂದು ಕಡೆ ಗವಿಮಠ, ಕುಷ್ಟಗಿ, ಹೊಸಪೇಟೆ ಹಾಗು ಕೊಪ್ಪಳ ಬಸ್ ನಿಲ್ದಾಣ ಮೂಲಕ ಗದಗಕ್ಕೆ ಹೋಗುವ ರಸ್ತೆಯ ನಾಲ್ಕು ದಿಕ್ಕಿಗೆ ಇರುವ ನಾಲ್ಕು ಗಡಿಯಾರಗಳು ಬೇರೆ ಬೇರೆ ಸಮಯ ತೋರಿಸುತ್ತವೆ.
ಕೊಪ್ಪಳದ ಬಸವೇಶ್ವರ ವೃತ್ತದಲ್ಲಿರುವ ಗಡಿಯಾರಗಳನ್ನು ಹತ್ತು ವರ್ಷಗಳ ಹಿಂದೆ ವೃತ್ತದಲ್ಲಿ ಗೋಪುರ ನಿರ್ಮಾಣ ಮಾಡಲಾಗಿದೆ.ಗೋಪುರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಗಡಿಯಾರಗಳು ಅಳವಡಿಕೆ ಮಾಡಲಾಗಿದೆ.ಈ ಗಡಿಯಾರಗಳು ಸಮಯವನ್ನು ಧ್ವನಿವರ್ಧಕದಲ್ಲಿ ಹೇಳುತ್ತಿದ್ದವು
ಪ್ರತಿ ಗಂಟೆಗೆ ಗಂಟೆ ಬಾರಿಸುತ್ತಿದ್ದ ಗಡಿಯಾರ
ಈಗ ತೋರಿಕೆಗೆ ಮಾತ್ರ ಇವೆ. ನಾಲ್ಕು ಗಡಿಯಾರದಲ್ಲಿ ಕೇವಲ ಒಂದು ಮಾತ್ರ ಚಾಲನೆಯಲ್ಲಿದೆ
ಮೂರು ಬಂದ್ ಆಗಿ ಸುಮಾರು ವರ್ಷಗಳಾಗಿವೆ.
ಗಡಿಯಾರದಲ್ಲಿ ಪ್ರಚಾರಕ್ಕಾಗಿ ಶಾಸಕ ಕೆ ರಾಘವೇಂದ್ರ ಹಿಟ್ನಾಳರ ಭಾವಚಿತ್ರ ಇವೆ. ಶಾಸಕರ ಅನುದಾನದಲ್ಲಿ ನಿರ್ಮಿಸಿದ ಗೋಪುರ
ಭಾವಚಿತ್ರ ಅಳವಡಿಕೆಗೆ ಇದ್ದ ಆಸಕ್ತಿ ಗಡಿಯಾರಗಳ ಚಾಲನೆಯ ಬಗ್ಗೆ ಇಲ್ಲ. ನಿರ್ವಹಣೆ ಮಾಡಬೇಕಾದ ನಗರಸಭೆ ನಿರ್ಲಕ್ಷ್ಯಕ್ಕೆ ಇದು ಸಾಕ್ಷಿಯಾಗಿದೆ. ನಗರಕ್ಕೆ ಬರುವ ಜನರಿಗೆ ಕೊಪ್ಪಳದ ಆಡಳಿತ ಸರಿ ಇಲ್ಲ ಎಂಬುವುದಕ್ಕೆ ಈ ಗಡಿಯಾರಗಳನ್ನು ನೋಡಿ ಹೌದು ಎನ್ನುವಂತೆ ಇದೆ.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.