Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೀಪಾವಳಿಗೆ ಮಣ್ಣಿನ ಹಣತೆಯ ಸಂಭ್ರಮ

ಸುದ್ದಿಮೂಲ ವಾರ್ತೆ

ಬೆಂಗಳೂರು,ನ.6: ದೀಪಾವಳಿ ಬಂತೆಂದರೆ ನಾಡಿನೆಲ್ಲೆಡೆ ಸಡಗರ ಸಂಭ್ರಮ , ಮಣ್ಣಿನ ದೀಪಗಳ ಸಾಲು ಸಾಲು ಹಚ್ಚಿ ಸಂಭ್ರಮಿಸುವುದು ವಾಡಿಕೆ. ಈಗ ಪರಿಸರ ಸ್ನೇಹಿ ವಸ್ತುಗಳ ಬಳಕೆ ಹೆಚ್ಚಾಗಿದೆ. ಅದೇ ರೀತಿ ಪರಿಸರ ಸ್ನೇಹಿಯಾದಂತಹ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.



ದೀಪಾವಳಿ ಎಂದರೆ ಬೆಳಕಿನ ಹಬ್ಬ. ಬೆಳಕು ಹರಡಲು ದೀಪಗಳು ಬೇಕೇ ಬೇಕು. ಇತ್ತೀಚೆಗೆ ಮಣ್ಣಿನ ಅದರಲ್ಲೂ ಜೇಡಿ ಮಣ್ಣಿನ ದೀಪಗಳು ದುಬಾರಿ ಎನಿಸಿದರೂ ಅದು ಪರಿಸರ ಸ್ನೇಹಿ ಉತ್ಪಾದನೆ ಆದ್ದರಿಂದ ಅದನ್ನೇ ಬಳಸುವವರೂ ಸಂಖ್ಯೆಯೂ ಹೆಚ್ಚಾಗೇ ಇದೆ.

ನಗರದ ಫ್ರೆಜರ್ ಟೌನ್ ಬಳಿ ಇರುವ ಪಾಟರಿ ಟೌನ್ ಬಳಿ ಶುದ್ಧ ಜೇಡಿ ಮಣ್ಣಿನಿಂದಲೇ ದೀಪಗಳ ತಯಾರಿಸಿ ತಲ ತಲಾಂತರಗಳಿಂದಲೂ ಇದನ್ನೇ ವೃತ್ತಿ ಜೀವನವನ್ನಾಗಿಸಿ ಬದಕುತ್ತಿರುವವರು ಗಲ್ಲಿಗಲ್ಲಿ ಗಳಲ್ಲೂ ಸಿಗುತ್ತಾರೆ. ಇವರು ತಯಾರಿಸುವ ವಸ್ತುಗಳು ಬೆಂಗಳೂರಿನ ಬಹುತೇಕ ನಗರದ ಎಲ್ಲಾ ಭಾಗಗಳಿಗೂ ಇಲ್ಲಿಂದಲೇ ರವಾನೆಯಾಗುತ್ತವೆ.

ಈ ಜೇಡಿ ಮಣ್ಣು ಈಗ ಕರ್ನಾಟಕದಲ್ಲಿ ಸಾಕಷ್ಟು ದೊರಕದ ಕಾರಣ ಈಗ ನೆರೆಯ ಆಂಧ್ರ ತಮಿಳುನಾಡು ಇನ್ನಿತರ ಕಡೆಗಳಿಂದ ಆಮದು ಮಾಡಿಕೊಳ್ಳಬೇಕಾಗಿದೆ.

ಜೇಡಿ ಮಣ್ಣಿನಿಂದ ತಯಾರಿಸುವ ವಸ್ತುಗಳಿಂದಲೇ ತಮ್ಮ ಜೀವನ ಕಟ್ಟಿಕೊಂಡಿರುವ ಇವರಿಗೆ ಕಳೆದ ಕೆಲವು ವರ್ಷಗಳ ಹಿಂದೆ ಇವರನ್ನು ಇಲ್ಲಿಂದ ಒಕ್ಕಲೆಬ್ಬಿಸುವ ಕೆಲಸವೂ ನಡೆದಿತ್ತು. ಆದರೆ, ಕಳೆದ ಸರಕಾರ ಅದಕ್ಕೆ ಅವಕಾಶ ಕೊಡದೆ ಇರುವುದರಿಂದ ನಮ್ಮ ವೃತ್ತಿ ಇನ್ನೂ ಇಲ್ಲೇ ಮುಂದುವರೆಸಿದ್ದೇವೆ ಎಂದು ತಯಾರಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ