Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶರಣರ ಪುಣ್ಯಭೂಮಿ ಸಗರನಾಡು : ಡಾ. ಎಚ್. ಟಿ. ಪೋತೆ

ಶರಣರ ಪುಣ್ಯಭೂಮಿ ಸಗರನಾಡು : ಡಾ. ಎಚ್. ಟಿ. ಪೋತೆ



ಸಗರನಾಡು ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಸುರಪುರ ಸಂಸ್ಥಾನದ ಡಾ. ರಾಜಾ ಕೃಷ್ಣಪ್ಪನಾಯಕ ಜ್ಯೋತಿ ಬೆಳಗಿಸುವದರ ಮುಲಕ ಉದ್ಘಾಟಿಸಿದರು.

 

ಜೇವರ್ಗಿ ೨೭ : ಶರಣರು, ಸಂತರು, ತತ್ವಪದಕಾರರು ಜನಿಸಿದ ಪುಣ್ಯಭೂಮಿಯೆ ನಮ್ಮ ಸಗರನಾಡು ಎಂದು ಗುಲಬರ್ಗ ವಿಶ್ವವಿದ್ಯಾಲಯ ಕಲಬುರಗಿ ಕನ್ನಡ ಅಧ್ಯಾಯನ ವಿಭಾಗದ ನಿರ್ದೇಶಕ ಡಾ. ಎಚ್. ಟಿ. ಪೋತೆ ಅಭಿಪ್ರಾಯಪಟ್ಟರು.

 

ಪಟ್ಟಣದ ಹಳೇ ತಹಸೀಲ್ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜೇವರ್ಗಿ ತಾಲೂಕ ಘಟಕದ ವತಿಯಿಂದ ಸಗರನಾಡು ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 

ಕಾರ್ಯಕ್ರಮವನ್ನುದ್ದೇಶಿಸಿ ಡಾ. ಎಚ್. ಟಿ. ಪೋತೆ ಮಾತನಾಡಿ ಮನುಷ್ಯ ಮನುಷನ್ನು ಗೌರವಿಸುವುದನ್ನು ಕಲಿಯಬೇಕು. ಗೌರವ ನೀಡುವುದನ್ನು ಕಲಿತಾಗ ಮಾತ್ರ ಶರಣರ ನಾಡಾದ ಸಗರನಾಡಿಗೆ ಒಂದು ಅರ್ಥ ಬರುತ್ತದೆ. ತನ್ನದೆಯಾದ ವೈಶಿಷ್ಠತಯನ್ನು ಹೊಂದಿದ ನಮ್ಮ ಸಗರ ನಾಡಿನ ಇತಿಹಾಸವನ್ನು ಅರಿತಿಕೊಳಬೇಕು. ಅರಿತುಕೊಳುವುದರ ಜೋತೆಗೆ ಸಾಮಾನ್ಯ ಜನರಿಗು ತಿಳಿಸಬೇಕು.

 

ರಾಜಕಾರಣಿಗಳು, ಯುವಕರು ಸಗರನಾಡಿನ ವೈಭವವನ್ನು ಹೆಚ್ಚಿಸಬೇಕು. ಸಾಹಿತ್ಯವನ್ನು ಉಳಿಸಿ ಬೇಳಸುವುದನ್ನು ನಾವು ಕಲಿಯಬೇಕು, ಇತರರಿಗು ಕಲಿಸಬೇಕು. ಅಂದಗಾ ಮಾತ್ರ ಈ ಕಾರ್ಯಕ್ರಮ ಮಾಡಿದಕ್ಕು ಸಾರ್ಥಕವಾಗುತ್ತದೆ ಎಂದರು.

 

ನಂತರ ಉತ್ಸವದ ಸರ್ವಾಧ್ಯಕ್ಷ ಡಾ. ಶ್ರೀಶೈಲ್ ನಾಗರಾಳ ಮಾತನಾಡಿ ಸಾಹಿತ್ಯ ಮತ್ತು ಸಂಸ್ಕೃತಿ ಎರಡು ಮಾನವನಿಗಾಗಿಯೆ ಇದೆ, ಮಾನವನಿಂದಲ್ಲೆ ಹಿಟ್ಟಿದೆ. ಒಂದನು ತಿಳಿಯದೆ ಇನ್ನೊಂದರ ಅರ್ಥವಾಗಲಾರದು. ಒಂದನ್ನು ಬಿಟ್ಟು ಇನ್ನೊಂದು ಬದಕುಕಲಾರದು. ಸಾಹಿತ್ಯವನ್ನು ಉಳಿಸಿ ಬೆಳಸಬೇಕು, ಇದು ನಮ್ಮೆಲ್ಲರ ಕರ್ತವ್ಯ ಎಂದರು.

 

ಈ ಸಂದರ್ಭದಲ್ಲಿ ವಿರಕ್ತ ಮಠ ಸೊನ್ನದ ಡಾ. ಶಿವಾನಂದ ಸ್ವಾಮಿಜಿ, ಅಣಜಿಗಿಯ ಶ್ರೀಸತ್ಯಾನಂದ ಮುತ್ಯಾ, ಸುರಪುರ ಸಂಸ್ಥಾನದ ಡಾ. ರಾಜಾ ಕೃಷ್ಣಪ್ಪನಾಯಕ, ಶಾಸಕ ಡಾ. ಅಜಯಸಿಂಗ್, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣ ಕಮಕನೂರ, ಮಲ್ಲಿನಾಥಗೌಡ ಯಲಗೋಡ, ಬಿಜೆಪಿ ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮರೆಪ್ಪ ಬಡಿಗೇರ, ಜಿ ಪಂ ಮಾಜಿ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ರಾಜಶೇಖರ ಸೀರಿ, ಹಳ್ಯಪ್ಪಾಚಾರ್ಯ ಜೋಶಿ, ಚನ್ನಮಲ್ಲಯ್ಯ ಹಿರೇಮಠ, ಎಸ್ ಕೆ ಬಿರಾದಾರ, ಚಂದ್ರಶೇಖರ ತುಂಬಗಿ, ಶ್ರೀಹರಿ ಕರಕಳ್ಳಿ, ಕಲ್ಯಾಣಕುಮಾರ ಸಂಗಾವಿ, ಡಾ. ಹಣಮಂತ್ರಾಯ ರಾಂಪೂರ, ಶರಣು ಧಾರವಾಡಕರ್, ಎಸ್ ಎ ಪಡಶಟ್ಟಿ, ಶರಣಗೌಡ ಬಿರಾದಾರ, ಮಲ್ಲಿನಾಥ ಪಾಟೀಲ್ ಸೇರದಂತೆ ಅನೇಕರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ