Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರದ ಭಾಷಣ ಓದದೆ ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತನೆ - ಡಾ.ರಝಾಕ್

ಸುದ್ದಿಮೂಲ ವಾರ್ತೆ ರಾಯಚೂರು, ಜ.24:
ರದ್ದುಪಡಿಸಲಾದ ಮಹಾತ್ಮಾಾ ಗಾಂಧಿ ಗ್ರಾಾಮೀಣ ಉದ್ಯೋೋಗ ಖಾತ್ರಿಿ ಯೋಜನೆ ಕುರಿತು ಚರ್ಚಿಸಲು ಕರ್ನಾಟಕ ಸರ್ಕಾರ ಕರೆದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೆ ಹೊರನಡೆದ ರಾಜ್ಯಪಾಲ ಥಾವರ ಚಂದ್ ಗೇಹ್ಲೋೋಟ್ ನಡೆ ಜನಪ್ರತಿನಿಧಿಗಳಿಗೆ, ರಾಜ್ಯದ ಜನರಿಗೆ ಮಾಡಿದ ಅಪಮಾನ ಎಂದು ಕೆಪಿಸಿಸಿ ಮಾಧ್ಯಮ ವಕ್ತಾಾರ ಡಾ.ರಝಾಕ್ ಉಸ್ತಾಾದ್ ಖಂಡಿಸಿದ್ದಾಾರೆ.
ವಿಕಸಿತ ಭಾರತ ಗ್ಯಾಾರಂಟಿ ರೋಜಗಾರ್ ಅಜೀವಿಕಾ ಮಿಷನ್ (ಗ್ರಾಾಮೀಣ) ಯೋಜನೆ (ಬಿ-ಗ್ರಾಾಮ್ ಜಿ) ಏಕಪಕ್ಷೀಯವಾಗಿ ಜಾರಿಗೊಳಿಸಿರುವುದರ ಬಗ್ಗೆೆ ಚರ್ಚಿಸಲು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ನಡೆಸುತ್ತಿಿದೆ. ರಾಜ್ಯಪಾಲರು ಸಂವಿಧಾನದ ಆಶಯದಂತೆ ಜಂಟಿ ಸಧನವನ್ನು ಉದ್ದೇಶಿಸಿ ರಾಜ್ಯ ಸರಕಾರ ನೀಡಿದ ಭಾಷಣ ಓದಬೇಕಿತ್ತು, ಅದನ್ನು ಧಿಕ್ಕರಿಸಿ ಬಿಜೆಪಿ ಪಕ್ಷದ ಏಜೆಂಟ್ ರೀತಿ ವರ್ತಿಸಿ ಕೆಲವು ಸಾಲುಗಳನ್ನು ಓದಿ ಹೊರನಡೆದಿದ್ದು ತಮ್ಮ ಮೇಲಿನ ಸಂವಿಧಾನಿಕ ಹೊಣೆಯನ್ನು ಕಡೆಗಣಿಸಿದ್ದಲ್ಲದೆ, ಸಂವಿಧಾನದ ವಿಧಿ 176 ಹಾಗೂ 163ರಂತೆ ಸರಕಾರ ಸಿದ್ದಪಡಿಸಿದ ಭಾಷಣ ರಾಜ್ಯಪಾಲರು ಓದಲೇಬೇಕೆಂಬ ನಿಯಮ ಉಲ್ಲಂಘಿಸಿದ್ದಾಾರೆ ಎಂದು ದೂರಿದ್ದಾಾರೆ.
ರಾಜ್ಯಪಾಲರು ತಾವೇ ಒಂದು ಸರಕಾರವೆಂದು ಭಾವಿಸಿದ್ದಾಾರೆ.ಇದು ಜನರಿಂದ ಚುನಾಯಿತ ಸರ್ಕಾರ ಎಂಬುದನ್ನು ಅರಿಯಬೇಕು. ರಾಜ್ಯಪಾಲರಿಗೆ ನೀಡಿದ ಭಾಷಣದಲ್ಲಿ ಇತ್ತೀಚಿಗೆ ಮನರೇಗಾ ಕಾಯ್ದೆೆ ರದ್ದುಗೊಳಿಸಿದ ಕೇಂದ್ರ ಸರಕಾರದ ನೀತಿಯ ಬಗ್ಗೆೆ ಹಾಗೂ ಬಿ-ಗ್ರಾಾಮ್ ಜಿ ಯೋಜನೆ ಜಾರಿಗೊಳಿಸಿದ ರೀತಿಯ ಬಗ್ಗೆೆ ವಿರೋಧ ವ್ಯಕ್ತಪಡಿಸಲಾಗಿತ್ತು. ಈ ಭಾಷಣದ ಪ್ರತಿಯನ್ನು ಎಲ್ಲಾಾ ಶಾಸಕರಿಗೆ ನೀಡಲಾಗಿತ್ತು. ಓದದೇ ಎರಡು ಸಾಲುಗಳು ಓದಿ ಹೊರ ನಡೆದು ರಾಜ್ಯಪಾಲರು ಕೇಂದ್ರದ ನಿರ್ಧಾರದಂತೆ ನಡೆದುಕೊಂಡಂತೆ ಕಾಣುತ್ತಿಿದೆ. ರಾಜ್ಯಪಾಲರ ಇಂತಹ ನಡೆಯು ದೇಶದ ಒಕ್ಕೂಟ ವ್ಯವಸ್ಥೆೆಗೆ ಮಾರಕವಾಗಿದೆ ಎಂದು ಆಪಾದಿಸಿದ್ದಾಾರೆ.
ಇತ್ತೀಚಿಗೆ ಕೇಂದ್ರದ ವಿರೋಧ ಪಕ್ಷಗಳ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಿದ್ದು ತಮಿಳುನಾಡು, ತೆಲಂಗಾಣ, ಕೇರಳ, ಪಶ್ಚಿಿಮ ಬಂಗಾಳ, ಪಂಜಾಬ್ ಹಾಗೂ ಇತರೆ ಸರ್ಕಾರಗಳ ಗುರಿಯಾಗಿಸಿದ್ದು ಕೇಂದ್ರದ ಇಂತಹ ನಡೆಯನ್ನು ಕಾಂಗ್ರೆೆಸ್ ಪಕ್ಷ ಹಾಗೂ ಸಾರ್ವಜನಿಕರು ತೀವ್ರವಾಗಿ ವಿರೋಧಿಸುವುದಾಗಿ ಖಂಡಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ