Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬರಿದಾದ ತುಂಗಭದ್ರಾ; ಕುಡಿವ ನೀರಿಗೂ ತತ್ವಾರ

ಸುದ್ದಿಮೂಲವಾರ್ತೆ

ಕೊಪ್ಪಳ ಜು 05: ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯವು ಜುಲೈ ತಿಂಗಳಲ್ಲಿ ತಳಮಟ್ಟಕ್ಕೆ ಕುಸಿದಿದೆ. ಈ ಬಾರಿ ನೀರಾವರಿಗೆ ನೀರು ನೀಡುವ ಬಗ್ಗೆ ಅನಿಶ್ಚಿತತೆ ಹೊಂದಲಾಗಿದೆ. ಈ ಮಧ್ಯೆ ಜಲಾಶಯನ್ನೆ ಆಶ್ರಯಿಸಿರುವ ಜಿಲ್ಲೆಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಏಳುವ ಮುನ್ಸೂಚನೆ ಇದೆ.

ಕರ್ನಾಟಕ, ಆಂಧ್ರ ಹಾಗು ತೆಲಂಗಾಣದ ರೈತರ ಜೀವ ನಾಡಿಯಾಗಿರುವ ತುಂಗಭದ್ರಾ ಜಲಾಶಯವು ಈ ಬಾರಿ ಭರ್ತಿಯಾಗುವ ಲಕ್ಷಣ ಇನ್ನೂ ಕಾಣುತ್ತಿಲ್ಲ. ಸಮಾನ್ಯವಾಗಿ ಜುಲೈ ಮೊದಲು ವಾರ ಜಲಾಶಯದಲ್ಲಿ ಅರ್ಧದಷ್ಟಾದರೂ ನೀರು ಬರುತ್ತಿತ್ತು. ಆದರೆ ಜುಲೈ ಮೊದಲು ವಾರ ಜಲಾಶಚಿiÀುದಲ್ಲಿ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿದೆ. ಈಗ ಜಲಾಶಚಿiÀುದಲ್ಲಿ ಕೇವಲ 3.056 ಟಿಎಂಸಿ ನೀರು ಸಂಗ್ರಹವಾಗಿದೆ.

1633 ಅಡಿ ಎತ್ತರ ನೀರು ನಿಲ್ಲುವ ಜಲಾಶಯದಲ್ಲಿ ಕಳೆದ ವರ್ಷ 1614 ಅಡಿ ನೀರು ನಿಂತಿತ್ತು. ಆದರೆ ಈ ಬಾರಿ 1576 ಅಡಿ ನೀರಿದೆ. ಕಳೆದ ವರ್ಷ ಈ ದಿನಕ್ಕೆ 48.18 ಟಿಎಂಸಿ ನೀರು ಜಲಾಶಯದಲ್ಲಿತ್ತು. ಆದರೆ ಈಗ ಕೇವಲ 3.056 ಟಿಎಂಸಿ ನೀರಿದೆ. 2016 ರ ನಂತರ ಇದೇ ಅವಧಿಯಲ್ಲಿ ಜಲಾಶಯ ನೀರಿನ ಮಟ್ಟ ತಳ ಮಟ್ಟಕ್ಕೀರೋದು ಎನ್ನಲಾಗಿದೆ.

ಈಗಿರುವ ನೀರಿನಲ್ಲಿ 2 ಟಿಎಂಸಿ ನೀರು ಡೆಡ್ ಸ್ಟೋರೇಜ್, 0.2ಟಿಎಂಸಿ ಆವಿಯಾಗುವ ನೀರು, ಉಳಿದ 0.8 ಟಿಎಂಸಿ ಆಂಧ್ರ ಹಾಗು ತೆಲಂಗಾಣದ ಪಾಲಿದೆ. ಈ ಎರಡೂ ರಾಜ್ಯಗಳು ತಮಗೆ ಅವಶ್ಯಕತೆ ಇದ್ದಾಗ ನೀರು ಪಡೆಯಬಹುದು. ಇದರಿಂದಾಗಿ ಜಲಾಶಯದಿಂದ ಕುಡಿವ ನೀರು ಅವಲಂಬಿಸಿರುವ ಬಳ್ಳಾರಿ. ವಿಜಯನಗರ, ಕೊಪ್ಪಳ ಹಾಗು ರಾಯಚೂರು ಜಿಲ್ಲೆಯ ಜನತೆ ಮುಂದಿನ ದಿನಗಳಲ್ಲಿ ಕುಡಿವ ನೀರಿಗಾಗಿ ಪರದಾಡುವಂಥ ಸ್ಥಿತಿ ನಿರ್ಮಾಣವಾಗಲಿದೆ ಎಂದು ಅಂದಾಜಿಸಲಾಗಿದೆ.

ಕಳೆದ ವರ್ಷ ಜಲಾಶಯವು ಜುಲೈ 12 ರಂದು ಭರ್ತಿಯಾಗಿ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಡಲಾಗಿತ್ತು. ಜುಲೈ 21 ರಿಂದ ರೈತರಿಗೆ ಕಾಲುವೆ ಮುಖಾಂತರ ನೀರು ಹರಿಸಲಾಗಿತ್ತು. ಆದರೆ ಈ ಬಾರಿ ರೈತರಿಗೆ ಯಾವಾಗ ನೀರು ನೀಡುವುದು ಎಂಬುವುದು ನಿಶ್ಚಿಯವಾಗಿಲ್ಲ. ಜಲಾಶಯದಲ್ಲಿ ಕನಿಷ್ಠ 45 ಟಿಎಂಸಿ ನೀರು ಸಂಗ್ರಹ. ಜಲಾಶಯಕ್ಕೆ ಕನಿಷ್ಠ 5 ಸಾವಿರ ಕ್ಯೂಸೆಕ್ ಒಳಹರಿವು ಇರಬೇಕು. ಆಗ ಐಸಿಸಿ ಸಭೆ ಕರೆದು ರೈತರ ಭೂಮಿಗೆ ನೀರು ಬಿಡುವ ಕುರಿತು ನಿರ್ಧಾರ ಮಾಡಲಿದ್ದಾರೆ. ಆದರೆ ಈ ವರ್ಷ ಜಲಾಶಯದಲ್ಲಿ ನೀರಿನ ಮಟ್ಟದ ಪಾತಾಳ ಬಿಟ್ಟು ಬಾರದ ಹಿನ್ನೆಲೆಯಲ್ಲಿ ಯಾವಾಗ ನೀರು ಕಾಲುವೆ ಹರಿಸಲಾಗುವುದು ಎಂಬುವುದನ್ನು ಹೇಳಲು ಬರುತ್ತಿಲ್ಲ.

ಜೂನ ತಿಂಗಳಲ್ಲಿ ಆರಂಭವಾದ ಮುಂಗಾರು ಹಂಗಾಮು ಈಗ ಜುಲೈ ತಿಂಗಳು ಆರಂಭವಾದರೂ ಕೊಪ್ಪಳ ಜಿಲ್ಲೆ ಸ್ಭೆರಿದಂತೆ ಮಲೆನಾಡಿನಲ್ಲಿ ಮಳೆಯಾಗಿಲ್ಲ. ಚಿಕ್ಕಮಗಳೂರು. ಶಿವಮೊಗ್ಗ. ದಾವಣಗೆರಿಯಲ್ಲಿ ಮಳೆಯಾಗದೆ ಇರುವದರಿಂದ ನದಿಯಲ್ಲಿ ನೀರು ಬಂದಿಲ್ಲ. ಇದರಿಂದಾಗಿ ತುಂಗಭದ್ರಾ ನದಿಯನ್ನು ಆಶ್ರಯದವರು ಆತಂಕಗೊಂಡಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ