Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಜಾಲಹಳ್ಳಿಿ ಜನತಾ ಕಾಲೋನಿ ಶಾಲೆಗೆ ಎಲ್ಲಾ ಸೌಲಭ್ಯ ಇದ್ದರೂ ಕಲಿಕೆಯಲ್ಲಿ ಹಿನ್ನಡೆ ಸಂಬಳ ಸೇರಿ ಶಾಲೆಗೆ ಸರ್ಕಾರ ಖರ್ಚು ಮಾಡುವ ಹಣ ಪ್ರತಿ ಮಾಹೆ 1,74,500 ರೂ?

ಸುದ್ದಿಮೂಲ ವಾರ್ತೆ ಜಾಲಹಳ್ಳಿಿ, ನ.06:
ರಾಜ್ಯ ಮತ್ತು ಕೇಂದ್ರ ಸರ್ಕಾರ ಶಿಕ್ಷಣದ ಏಳಿಗೆಗಾಗಿ ಅನೇಕ ಯೋಜನೆಗಳನ್ನು ತಂದು ಗ್ರಾಮೀಣ ಭಾಗದಲ್ಲಿ ಎಲ್ಲಾ ವಿದ್ಯಾಾರ್ಥಿಗಳು ಕನಿಷ್ಠ ಓದು ಬರಹ ಕಲಿಯಬೇಕು, ಜೊತೆಗೆ ಹತ್ತನೇ ತರಗತಿಯವರೆಗೆ ಕಲಿಯಲೇಬೇಕು ಎಂದು ಉಚಿತ ಮತ್ತು ಕಡ್ಡಾಾಯ ಶಿಕ್ಷಣ ಜಾರಿಗೆ ತಂದರೂ ಇನ್ನೂ ಗ್ರಾಾಮೀಣ ಭಾಗದಲ್ಲಿ ಎಲ್ಲರೂ ವಿದ್ಯಾಾವಂತರಾಗುತ್ತಿಿಲ್ಲ, ಇದಕ್ಕೆೆ ನಿದರ್ಶನ ಜಾಲಹಳ್ಳಿಿ ಜನತಾ ಕಾಲೋನಿ ಸರಕಾರಿ ಪ್ರಾಾಥಮಿಕ ಶಾಲೆಯ ವಿದ್ಯಾಾರ್ಥಿಗಳ ಕಲಿಕೆ ಕೂಡಾ ಹಿನ್ನೆೆಡೆೆಯಲ್ಲಿ ಸಾಗಿರುವುದು.
ಈ ಶಾಲೆ ಜನತಾ ಕಾಲೋನಿಯಿಂದ 700 ಮೀಟರ್ ಅಂತರದಲ್ಲಿ ಇದೆ ಶಾಲೆಗೆ ಕುಡಿಯುವ ನೀರಿನ ಸೌಲಭ್ಯ, ಕಂಪೌಂಡ್,ಮೂರು ಜನ ಶಿಕ್ಷಕರು ಇದ್ದಾಾರೆ.
ಇದರಲ್ಲಿ ಒಬ್ಬರು ಖಾಯಂ ಶಿಕ್ಷಕರು ( ಎರವಲು) ,ಇಬ್ಬರೂ ಅತಿಥಿ ಶಿಕ್ಷಕರು ಇದ್ದಾರೆ. 1 ರಿಂದ 5 ನೆಯ ತರಗತಿಗೆ 49 ವಿದ್ಯಾಾರ್ಥಿಗಳು ಇದ್ದಾರೆ ವಿದ್ಯಾಾರ್ಥಿಗಳಿಗೆ ಅನುಗುಣವಾಗಿ 3 ಜನ ಶಿಕ್ಷಕರ ಸಂಖ್ಯೆೆ ಇದ್ದರೂ ಕಲಿಕೆ ಬಹಳಷ್ಟು ಹಿಂದೆ ಇದೆ.
ಇಲ್ಲಿ ಖಾಯಂ ಶಿಕ್ಷಕರ ಸಂಬಳ ,ಅತಿಥಿ ಶಿಕ್ಷಕರ ಸಂಬಳ,ಅಡುಗೆ ಯವರ ಸಂಬಳ,ಬಿಸಿಯೂಟಕ್ಕೆೆ ಸರ್ಕಾರ ಪ್ರತಿ ಮಾಸಿಕ ಖರ್ಚು ಮಾಡುವ ಹಣ ಒಟ್ಟು ಒಂದು ಲಕ್ಷ ಎಪ್ಪತ್ತು ನಾಲ್ಕು ಸಾವಿರ ವ್ಯಯವಾಗುತ್ತದೆ .
ಇಷ್ಟೆೆಲ್ಲಾ ಹಣ ಖರ್ಚು ಮಾಡಿದರೂ ವಿದ್ಯಾಾರ್ಥಿಗಳ ಕಲಿಕೆಯ ಗುಣ ಮಟ್ಟದಲ್ಲಿ ಬದಲಾವಣೆ ಯಾಕೆ ಆಗಿಲ್ಲ ಎಂದು ಗ್ರಾಾಮದ ಶಿಕ್ಷಣ ಪ್ರೇೇಮಿಗಳ ಯಕ್ಷ ಪ್ರಶ್ನೆೆಯಾಗಿದೆ,
ನಾಲ್ಕನೇ ಮತ್ತು ಐದನೆ ತರಗತಿಯ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲಿಿಷ್ ಸರಳ ಶಬ್ದಗಳನ್ನು ಕಪ್ಪುು ಹಲಗೆ ಮೇಲೆ ಬರಿಸಿದಾಗ ಮಕ್ಕಳು ಎರಡೂ ಭಾಷೆಗಳ ಶಬ್ದಗಳನ್ನು ತಪ್ಪಾಾಗಿ ಬರೆದರು.
ಮುಖ್ಯೋೋಪಾಧ್ಯಾಯರನ್ನು ಕೇಳಿದಾಗ ನೋಡ್ರಿಿ ನಾನು ಈ ಶಾಲೆಗೆ ಎರವಲು ಬಂದಿದ್ದೇನೆ. ನಾನು ಏನು ಮಾಡ್ಲಿಿ ? ನನಗೆ ಇನ್ ಐದು ತಿಂಗಳಾ ನೌಕರಿ ಆದ, ನಾನು ಬೇಸ ಕಲಿಸ್ರಿಿ ಅಂತಹ ಹೇಳತಿನ್ರಿಿ ಎಂದು ಮುಖ್ಯೋಪಾಧ್ಯಾಯನಿ ಅಭಿಪ್ರಾಾಯ ವ್ಯಕ್ತಪಡಿಸಿದರು.
ನಾವು ಏನ್ ಮಾಡಬೇಕ್ರಿ ನಾವು ಈ ವರ್ಷ ಈ ಶಾಲೆಗೆ ಅತಿಥಿ ಶಿಕ್ಷಕರಾಗಿ ಬಂದೀವಿ ಹಿಂದಿನೋರು ( ಹಿಂದೆ ಕಲಿಸಿದವರು) ಕನ್ನಡ , ಇಂಗ್ಲಿಿಷ್ ಕಲಿಸಬೇಕಿತ್ತು ಎಂದು ಸಮರ್ಥಿಸಿಕೊಂಡರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ