Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭೂ ಪರಿಹಾರ ತಾರತಮ್ಯ ; ಅಧಿಕಾರಿಗಳೊಂದಿಗೆ ರೈತರ ವಾಗ್ವಾದ

ಸುದ್ದಿಮೂಲ ವಾರ್ತೆ ಕವಿತಾಳ, ನ.30:
ಬೆಳಗಾವಿ ರಾಯಚೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿಿರುವ ಸಮೀಪದ ಅಮೀನಗಡ, ವಟಗಲ್ ಗ್ರಾಾಮಗಳ ವ್ಯಾಾಪ್ತಿಿಯ ಭೂ ನಿರಾಶ್ರಿತ ರೈತರಿಗೆ ಸೂಕ್ತ ಪರಿಹಾರ ಸಿಕ್ಕಿಿಲ್ಲ ಎಂದು ಆರೋಪಿಸಿದ ರೈತರು ಅಧಿಕಾರಿಗಳೊಂದಿಗೆ ವಾಗ್ವಾಾದ ನಡೆಸಿದರು.
ಕಾಮಗಾರಿ ಸ್ಥಳಕ್ಕೆೆ ಶನಿವಾರ ಭೇಟಿ ನೀಡಿದ ಹೆದ್ದಾರಿ ಭೂ ಸ್ವಾಾಧೀನ ಅಧಿಕಾರಿ ಗುರುಸಿದ್ದಯ್ಯ ಮತ್ತು ತಹಶೀಲ್ದಾಾರ ಮಂಜುನಾಥ ಭೋಗಾವತಿ ಅವರಿಗೆ ಮನವಿ ಮಾಡಿದ ರೈತರು ಸೂಕ್ತ ಪರಿಹಾರ ನೀಡಬೇಕು, ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಒಂದು ಜಮೀನಿಗೆ ಒಂದು ಚದುರ ಮೀಟರ್ ಗೆ 50 ರಂತೆ ಪರಿಹಾರ ನಿಗದಿ ಮಾಡಿದ್ದರೆ ಅದರ ಪಕ್ಕದ ಜಮೀನಿಗೆ 37 ರಂತೆ ಚದರ ಅಡಿಗೆ ನಿಗದಿ ಮಾಡಲಾಗಿದೆ ಈ ತಾರತಮ್ಯ ಸರಿಯಲ್ಲ ಎಂದು ರೈತರು ಹುಚ್ಚರಡ್ಡಿಿ ಮತ್ತು ಹನುಮರಡ್ದೆೆಪ್ಪ ಮತ್ತಿಿತರರು ದೂರಿದರು.
ಹೊಲದಲ್ಲಿನ ಕೊಳವೆಬಾವಿ ರಸ್ತೆೆ ನಿರ್ಮಾಣ ಜಾಗದಲ್ಲಿ ಹೋಗಿದೆ ಹೀಗಾಗಿ ಪರಿಹಾರ ವಿತರತಣೆ ಮಾಡಬೇಕು ಎಂದು ರೈತ ಹಸೇನ್ ಸಾಬ್ ಆಗ್ರಹಿಸಿದರು.
ಭೂ ಸ್ವಾಾಧೀನ ಅಧಿಕಾರಿ ಗುರುಸಿದ್ದಯ್ಯ ಮತ್ತು ತಹಶೀಲ್ದಾಾರ ಮಂಜುನಾಥ ಭೋಗಾವತಿ ಮಾತನಾಡಿ ಹೆಚ್ಚಿಿನ ಪರಿಹಾರ ಪಡೆಯಲು ರೈತರಿಗೆ ಅವಕಾಶಗಳಿದ್ದು ನ್ಯಾಾಯಾಲಯದ ಮೂಲಕ ಪಡೆಯಬೇಕು ಮತ್ತು ಇದುವರೆಗೂ ಪರಿಹಾರ ಪಡೆಯದ ರೈತರು ನ್ಯಾಾಯಾಲಯದಲ್ಲಿ ಜಮಾ ಮಾಡಿದ ಪರಿಹಾರ ಮೊತ್ತವನ್ನು ಪಡೆಯಬೇಕು ಎಂದರು. ಈ ಸಂದರ್ಭದಲ್ಲಿ ಜಿ ಆರ್ ಎಲ್ ಕಂಪನಿಯ ಎ ಜಿ ಎಂ ಭೀಮರಾವ್,
ಸಿ ಪಿ ಐ ಶಶಿಕಾಂತ ಎಂ ಸಿರವಾರ, ಪಿ ಎಸ್ ಐ ವೆಂಕಟೇಶ ನಾಯಕ, ಗ್ರಾಾಮ ಆಡಳಿತಧಿಕಾರಿಗಳಾದ ರವಿಕುಮಾರ, ನಿಂಗಪ್ಪ ಇನ್ನಿಿತರರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ