Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆಪಿಸಿಸಿ ಕಚೇರಿಯಲ್ಲಿ ಗಾಂಧಿ, ಶಾಸಿ ಜಯಂತಿ ಕಾರ್ಯಕ್ರಮ ಅಧಿಕಾರ ಹಂಚಿಕೆ ಹೇಳಿಕೆ ಪಕ್ಷ ವಿರೋಧಿ : ಡಿಸಿಎಂ ಡಿಕೆಶಿ

ಸುದ್ದಿಮೂಲ ವಾರ್ತೆ ಬೆಂಗಳೂರು, ಅ.02:
ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿಎಂ, ನಾನು ಸೇರಿದಂತೆ ಯಾರೇ ಮಾತನಾಡಿದರೂ ಅದು ಪಕ್ಷ ವಿರೋಧಿ ಕೆಲಸ. ಸಿಎಂ ಸಿದ್ದರಾಮಯ್ಯ ಹಾಗೂ ನಾನು ನಮ್ಮ ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ಕೇಳುತ್ತೇವೆ ಎಂದು ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಹಾತ್ಮಾಾ ಗಾಂಧಿ ಹಾಗೂ ಲಾಲ್ ಬಹರ್ದ್ದೂ ಶಾಸಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಎಲ್ಲರೂ ನಮ್ಮ ಪಕ್ಷದ ಶಿಸ್ತಿಿನ ಚೌಕಟ್ಟಿಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಸಾಕಷ್ಟು ವಿಚಾರ ಮಾತಾಡಬೇಕು. ದಸರಾ ಮುಗಿದ ಮೇಲೆ ಮಾತನಾಡುತ್ತೇನೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಲ ಇದೆ’’ ಎಂದರು.
ಅಂದಾಜು 600-700 ನಿಗಮ, ಮಂಡಳಿಗಳ ನಿರ್ದೇಶಕರ ಪಟ್ಟಿಿ ಸಿದ್ದವಿದೆ. ಆ ಬಗ್ಗೆೆ ನಾನು, ಸಿಎಂ ಚರ್ಚೆ ನಡೆಸಿ ಎರಡು ಮೂರು ದಿನಗಳಲ್ಲಿ ತೀರ್ಮಾನಿಸಿ ಘೋಷಣೆ ಮಾಡುತ್ತೇವೆ. ನಿಗಮ, ಮಂಡಳಿ ಅಧ್ಯಕ್ಷರು ಎರಡು ವರ್ಷ ಆದ ಬಳಿಕ ರಾಜೀನಾಮೆ ನೀಡಬೇಕು. ನಾವು ಎಲ್ಲರೂ ಅಧಿಕಾರವನ್ನು ಹಂಚಬೇಕಾಗುತ್ತದೆ. ನಾನು ಮಾತನಾಡಿದ್ದು ಬೋರ್ಡ್ ಅಧ್ಯಕ್ಷರು, ಡೈರೆಕ್ಟರ್ಗಳ ಅಧಿಕಾರ ಹಂಚಿಕೆ ಬಗ್ಗೆೆ ಮಾತ್. ಸಿಂದ ಹುದ್ದೆ ಬಗ್ಗೆೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆೆಸ್ ಇಲ್ಲದೇ ಆಶ್ರಯ ಇಲ್ಲ : ’’ನಮಗೆ ಸ್ವಾಾತಂತ್ರ್ಯ ತಂದುಕೊಟ್ಟವರು ಮಹಾತ್ಮ ಗಾಂಧಿ. ಇಂದು ವನ್ಯಜೀವಿಗಳ ಪ್ರೋೋತ್ಸಾಾಹದ ದಿನ. ಅದನ್ನು ಉದ್ಘಾಾಟನೆ ಮಾಡಿದ್ದೇನೆ. ಗಾಂಧಿ ಅಂದರೆ ಅದೊಂದು ಶಕ್ತಿಿ. ಗಾಂಧಿಯವರ ಜನ್ಮದಿನಾಚರಣೆ ನಡೆಯುತ್ತಿಿದೆ. ಈ ವರ್ಷ ಗಾಂಧಿ ಭಾರತಕ್ಕೂ ನೂರು ವರ್ಷ ಆಗಿದೆ. ಇಡೀ ವರ್ಷ ಸಂಘಟನೆಯ ವರ್ಷ ಮಾಡುತ್ತಿಿದ್ದೇವೆ. ಬಿಜೆಪಿಗೆ, ಗಾಂಧಿಯವರಿಗೆ ಸಂಬಂಧ ಇಲ್ಲ. ಕಾಂಗ್ರೆೆಸ್ ಇಲ್ಲದೇ ಆಶ್ರಯ ಇಲ್ಲ. ಕಾಂಗ್ರೆೆಸ್ ಕೊಟ್ಟ ಕಾರ್ಯಕ್ರಮ ಬದಲಾವಣೆ ಮಾಡಿಲ್ಲ’ ಎಂದರು.
ನಮ್ಮ ಗ್ಯಾಾರಂಟಿ ನಕಲು ಮಾಡಿದ್ದಾರೆ : ’’ನೆಲ್ಸನ್ ಮಂಡೇಲಾ, ಬರಾಕ್ ಒಬಾಮ ಅವರು ಗಾಂಧಿಯವರನ್ನು ಹಾಡಿ ಹೊಗಳಿದ್ದಾರೆ. ಇಂದು ಗಾಂಧೀಜಿಯವರನ್ನು ಸ್ಮರಿಸೋಣ. ನಾವು ಶಾಂತಿ, ಸಹಬಾಳ್ವೆೆಯಿಂದ ಬದುಕಬೇಕು. ಗಾಂಧಿ ಬಗ್ಗೆೆ ಪುಸ್ತಕದಲ್ಲಿ ಮಾತ್ರ ಓದಬಾರದು. ವ್ಯಕ್ತಿಿ ಮರಣ ಆಗಿರಬಹುದು. ಆದರೆ, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿಮ್ಮನ್ನು ನೀವು ನಿಯಂತ್ರಿಿಸಬೇಕು. ಅದು ಆಗಬೇಕಾದರೆ ಮೆದುಳು ಉಪಯೋಗಿಸಬೇಕು ಎಂದು ಗಾಂಧೀಜಿ ಅವರು ಹೇಳಿದ್ದರು. ಈ ದೇಶಕ್ಕೆೆ ನಾವೇ ಮೂಲ. ಗ್ಯಾಾರಂಟಿ ಯೋಜನೆಗಳನ್ನು ಸಹ ನಾವು ಜಾರಿ ಮಾಡಿದ್ದೇವೆ. ಬಿಸಿಯೂಟ, ಆರ್ಧಾ ಸೇರಿ ಅನೇಕ ಯೋಜನೆಗಳನ್ನು ತಂದಿದ್ದೇವೆ. ಆದರೆ, ಇವತ್ತು ಬಿಜೆಪಿಯವರು ನಮ್ಮ ಗ್ಯಾಾರಂಟಿಗಳನ್ನು ನಕಲು ಮಾಡುತ್ತಿಿದ್ದಾರೆ ಎಂದು ಟೀಕಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ