Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗಂಗಾವತಿ ರೈಲು ನಿಲ್ದಾಣ ಸಹ ಅಮೃತ ಯೋಜನೆಗೆ ಒಳಪಡಲಿದೆ- ಸಂಗಣ್ಣ ಕರಡಿ

ಸುದ್ದಿಮೂಲಮಾರ್ತೆ

ಕೊಪ್ಪಳ ಆ ೦6:ಗಂಗಾವತಿ ನಗರವನ್ನು ಸಹ ಅಮೃತ ಭಾರತ ಯೋಜನೆಗೆ ಒಳಪಡಿಸಲು ಒತ್ತಾಯಿಸಿದ್ದೇವೆ. ಈ ಸ್ಟೇಷನ್ ಸೇರುವ ಯೋಜನೆ ಇದೆ ಎಂದು ಸಂಗಣ್ಣ ಕರಡಿ ಹೇಳಿದರು.

ಅವರು ಇಂದು ಅಮೃತ ಭಾರತ ಯೋಜನೆಯಲ್ಲಿ ಕೊಪ್ಪಳದ ನಗರದ ರೈಲು ನಿಲ್ದಾಣಕ್ಕೆ ಶಂಕು ಸ್ಥಾಪನೆ ಮಾಡಿ ಮಾತನಾಡಿ ಇವತ್ತು ನಾವು ಇರುತ್ತವೆ. ನಾಳೆ ಇರಲಿಕ್ಕಿಲ್ಲ ಆದರೆ ಮೋದಿ ಸರಕಾರದಲ್ಲಿ ಆಗಿರುವ ಅಭಿವೃದ್ದಿಯಾಗುತ್ತದೆ ಎಂಬುವುದು ಹೆಮ್ಮೆ ಇದೆ.

ಜಗತ್ತು ಮೆಚ್ಚಿದ ನಾಯಕ ನರೇಂದ್ರ ಅವರು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಭಾರತದ ಮುಂದಿನ ದಿನಗಳಲ್ಲಿ ಏನಾಗಬೇಕು ಎಂಬ ದೂರದೃಷ್ಠಿ ಹೊಂದಿದ್ದಾರೆ. 25 ಸಾವಿರ ಕೋಟಿ ರೂಪಾಯಿಯಲ್ಲಿ ಭಾರತದ 508 ರೈಲು ನಿಲ್ದಾಣಗಳು ಅಭಿವೃದ್ಧಿ ಗಾಗುತ್ತದೆ. ಭಾರತ ಈಗ ಬದಲಾವಣೆಯಾಗುತ್ತಿದೆ. ಈ ಬದಲಾವಣೆಯನ್ನು ಜಗತ್ತು ನೋಡುತ್ತಿದೆ ಎಂದರು.

ಸಿದ್ದರಾಮಯ್ಯನವರು ಮೋದಿ ದೇಶವನ್ನು ಹಾಳು ಮಾಡಿದ್ದಿರಿ ಎಂದಿದ್ದಾರೆ ಎಂದಿದ್ದಾರೆ. ಆದರೆ ಮತ್ಸರದಿಂದ ಈ ರೀತಿ ಮಾತನಾಡಬಾರದು. ರಸ್ತೆಯಲ್ಲಿ ತೊಟ್ಟಿಲು ಕಟ್ಟುವಂತೆ ರಸ್ತೆಗಳಾಗಿವೆ

ಜನಪರ ಯೋಜನೆಗಳನ್ನು ನಿಲ್ಲಿಸಬಾರದು. ಖಜಾನೆಯಲ್ಲಿದ್ದ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತಿದ್ದಾರೆ. ಅಭಿವೃದ್ದಿಗೆ ಹಣವೇ ಇಲ್ಲ ಕೇವಲ ಮೋದಿಯನ್ನು ಟೀಕಿಸುವುದು ಬಿಡಬೇಕು ಎಂದರು.

ಲೋಕಸಭಾ ಕ್ಷೇತ್ರದಲ್ಲಿ 9 ರೈಲು ಸೇತುವೆಗಳ ನಿರ್ಮಾಣವಾಗಿವೆ. ಸ್ವಾಮಿ ವಿವೇಕಾನಂದ. ಮೆಡಿಕಲ್ ಕಾಲೇಜು ವಿವಿಧ ಸೇತುವೆಗಳು ನಿರ್ಮಾಣವಾಗಲಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಲಾಗಿದೆ ಎಂದರು.

ಗದಗ ವಾಡಿ ಯೋಜನೆಯಲ್ಲಿ ಕುಷ್ಟಗಿಗೆ ರೈಲು ಬರಲಿದೆ. ಮಹಿಬೂಬನಗರ ಮುನಿರಾಬಾದ್ ರೈಲು ಸೆಪ್ಟಂಬರ್ ಗೆ ಸಿಂಧನೂರು ವರೆಗೂ ರೈಲು ಬರಲಿದೆ. ಚಿತ್ರದುರ್ಗಾದಿಂದ ಕೊಪ್ಪಳ ಮಾರ್ಗವಾಗಿ ರೈಲು ಬರಲಿದೆ ಈ ಕುರಿತು ಸಮಿಕ್ಷೆ ನಡೆಯುತ್ತಿದೆ ಎಂದರು. ಪುನಾ ರಾಯಚೂರು ಹಾಗು ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗಳು ಮಂಜೂರಾಗಿವೆ. ಈಗಿನ ಸರಕಾರ ರಾಜಕೀಯ ಮಾಡದೆ ವಿಮಾನ ನಿಲ್ದಾಣಕ್ಕೆ ಒತ್ತು ನೀಡಬೇಕು ಎಂದರು

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಹೇಮಲತಾ ನಾಯಕ ಮುಂದಿನ ದಿನಗಳಲ್ಲಿ ಕೊಪ್ಪಳ ರೈಲು ನಿಲ್ದಾಣ ದೊಡ್ಡ ನಗರಗಳಲ್ಲಿರುವ ರೈಲು ನಿಲ್ದಾಣದಂತೆ ಅಭಿವೃದ್ದಿ ಪಡಿಸಲಾಗುವುದು . ರೈಲು ನಿಲ್ದಾಣಗಳಲ್ಲಿ ಪುಸ್ತಕ ಹಾಗು ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಬೇಕೆಂದರು.

 

ಸ್ವಾಗತವನ್ನು ಹೆಚ್ವುವರಿ ವಿಭಾಗೀಯ ವ್ಯವಸ್ಥಾಪಕ ಸ‌ಂಜಯಕುಮಾರ ಸಿಂಗ್ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದರು ಕೊಪ್ಪಳ ಮೇಲಂಸ್ತು ಹಾಗು ಸುಂದರೀಕರಣ ಮಾಡಲು 21 ಕೋಟಿ ರೂಪಾಯಿ ಮಂಜೂರಾಗಿದೆ. ಆನೇಗೊಂದಿ ಹಾಗು ಹಂಪಿಗೆ ಬರುವ ಪ್ರವಾಸಿಗರಿಗಾಗಿ ಈ ಸ್ಟೇಷನ್ ಮಾದರಿಯಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ ಈ ಹಿಂದೆ ರೈಲು ನಿಲ್ದಾಣಕ್ಕೆ ಆಗಮಿಸಿದರೆ ಮೂಗು ಮುಚ್ಚಿಕೊಂಡು ಬರಬೇಕಾಗಿತ್ತು. ಆದರೆ ಈಗ ರೈಲು ನಿಲ್ದಾಣಗಳು ಅಭಿವೃದ್ದಿ ಹೊಂದುತ್ತವೆ. ಜೂನ ತಿಂಗಳಲ್ಲಿ ಕುಷ್ಟಗಿಗೂ ರೈಲು ಬರಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಶಾಸಕರಾದ ದೊಡ್ಡನಗೌಡ ಪಾಟೀಲ ಹೇಮಲತಾ ನಾಯಕ, ಮಾಜಿ ಶಾಸಕ ಕೆ ಶರಣಪ್ಪ , ಬಸವರಾಜ ದಡೇಸಗೂರು, ನಗರಸಭಾ ಸದಸ್ಯರಾದ ರಾಜಶೇಖರ ಆಡೂರು, ವಿದ್ಯಾ ಹೆಸರೂರು, ಉಮಾ ಪಾಟೀಲ, ಸರ್ವೇಶ ಬನ್ನಿಕೊಪ್ಪ, ದೇವಕ್ಕ ಕಂದಾರಿ, ಜಿಲ್ಲಾಧಿಕಾರಿ ಸುಂದರೇಶ ಬಾಬು, ಎಸ್ಪಿ ಯಶೋದಾ ವಂಟಿಗೋಡಿ
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ