Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಘನಮಠ ಶಿವಯೋಗಿಗಳ ಪಲ್ಲಕ್ಕಿ ಉತ್ಸವ ಸಾಮೂಹಿಕ ವಿವಾಹ, ಬೆಳ್ಳಿಛತ್ರಿ ಕಳಸಾರೋಹಣ

ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.24
ನಾಡಿನ ಕೃಷಿಕರಿಗೆ ಅತ್ಯುಪಯುಕ್ತ ಕೃಷಿಯ ಜ್ಞಾಾನ ಕೈಪಿಡಿ ನೀಡಿ ರೈತರ ಬಾಳಿಗೆ ಬೆಳಕಾದ ಕೃಷಿ-ಋಷಿ, ವೈರಾಗ್ಯ ಚಕ್ರವರ್ತಿ ಎಂದೇನಿಸಿದ ಸಂತೆಕೆಲ್ಲೂರ ಘನಮಠ ನಾಗಭೂಷಣ ಶಿವಯೋಗಿಗಳ ಸುಕ್ಷೇತ್ರ ಸಂತೆಕೆಲ್ಲೂರಲ್ಲಿ ಘನಮಠರ 146ನೇ ಪುಣ್ಯಸ್ಮರಣೆ ನಿಮಿತ್ಯ ನಾನಾ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ನಡೆದವು.
ಘನಮಠ ಶಿವಯೋಗಿಗಳ 146 ನೇ ಪುಣ್ಯಸ್ಮರಣೋತ್ಸವ ನಿಮಿತ್ಯ ಪ್ರತಿವರ್ಷದ ಪದ್ದತಿಯಂತೆ ಬೆಳಗ್ಗೆೆ ಘನಮಠರ ಕತೃಗದ್ದುಗೆಗೆ ರುದ್ರಾಾಭಿಷೇಕ ಸಹಸ್ರ ಬಿಲ್ವಾಾರ್ಚನೆ ಶ್ರೀಮಠದ ಸೂಗಯ್ಯ ಹಿರೇಮಠ ಅವರ ಪೌರೋಹಿತ್ಯದಲ್ಲಿ ನಡೆಯಿತು. ಗುಲಬರ್ಗಾ ಕೆಂಚಬಸವ ಶಿವಾಚಾರ್ಯರಿಂದ ಜಂಗಮ ವಟುಗಳಿಗೆ ದೀಕ್ಷಾ ಕಾರ್ಯಕ್ರಮ ಜರುಗಿದವು. ಶ್ರೀಮಠದ ಗುರುಬಸವಶ್ರೀಗಳು, ಹಾಲ್ವಿಿ, ಜೆರಟಗಿ, ನಂದವಾಡಗಿ, ಅಡವಿ ಅಮರೇಶ್ವರ, ಮಸ್ಕಿಿ, ಮಹಾಂತಿನಮಠ ಪೂಜ್ಯರ ಸಮಕ್ಷಮ ಗ್ರಾಾಮದ ಶಾಂತಲಿಂಗಯ್ಯ ಹಿರೇಮಠ ಪೌರೋಹಿತ್ಯದಲ್ಲಿ 2 ಜೋಡಿ ನೂತನ ವಧುವರರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆೆ ಕಾಲಿಟ್ಟರು.
ಪಲ್ಲಕ್ಕಿಿ ಮೆರವಣಿಗೆ : ಬಸವಾದಿ ಶರಣರ ವಚನ ಸಾಹಿತ್ಯ ಹಾಗೂ ಘನಮಠೇಶ್ವರರ ಭಾವಚಿತ್ರವಿರಿಸಿದ ಪಲ್ಲಕ್ಕಿಿ ಮೆರವಣಿಗೆ ಗ್ರಾಾಮದ ಪ್ರಮುಖ ಬೀದಿಗಳಲ್ಲಿ ತಾರಾ ನಗರ ಚಂದ್ರಯ್ಯಸ್ವಾಾಮಿಗಳ ವೀರಗಾಸೆ ಮತ್ತು ನಾನಾ ಕಲಾಗೊಂಬೆ, ಮರಗುಣಿತ ಡೋಲು ಭಾಜಾ ಭಂಜಂತ್ರಿಿ ಕಳಸ ಕನ್ನಡಿಯೊಂದಿಗೆ ವೈಭವದಿಂದ ಮೆರವಣಿಗೆ ನಡೆಯಿತು. ಜೆರಟಗಿ ಮಹಾಂತ ಸ್ವಾಾಮಿಗಳು, ಘನಮಠೇಶ್ವರ ಮಠದ ಗುರುಬಸವಶ್ರೀಗಳು ಮಹಾಂತ ಶ್ರೀಗಳು, ಹಾಲ್ವಿಿ ಮಹಾಂತ ಶ್ರೀಗಳು, ಯಡ್ರಾಾಮಿ ಸಿದ್ದಲಿಂಗ ಸ್ವಾಾಮಿಗಳು ರಾಜಶೇಖರ ಶಿವಾಚಾರ್ಯರು ಚೌದಾಪುರಿ, ನಂದವಾಡಗಿ ಚನ್ನಬಸವ ಶಿವಾಚಾರ್ಯರು, ಮಸ್ಕಿಿ ವರ ರುದ್ರಮುನಿ ಶಿವಾಚಾರ್ಯರು ಮಹಾಂತಿನಮಠ ಮಹಾಂತ ಶಿವಾಚಾರ್ಯರ ಪ್ರಶಾಂತ ದೇವರ ಸಮ್ಮುಖದಲ್ಲಿ ಉತ್ಸವಕ್ಕೆೆ ಚಾಲನೆ ನೀಡಲಾಯಿತು.
ಸಹಸ್ರಾಾರು ಭಕ್ತರ ಆಗಮನ: ಶ್ರೀ ಮಠದ ಸದ್ಬಕ್ತರಾದ ಕೆ.ಅಮರೇಗೌಡ ಪಾಟೀಲ್, ಸಿದ್ದರಾಮಪ್ಪ ಸಾಹುಕಾರ, ಆದನಗೌಡ ಪಾಟೀಲ್, ಡಾ, ಸಿ.ಬಿ ನಾವದಗಿ, ಮಹಾಂತಪ್ಪ ನಾವದಗಿ ವಕೀಲರು, ದೊಡ್ಡಪ್ಪ ಸಾಹುಕಾರ, ಮರೇಗೌಡ ಪಾಟೀಲ್, ಶ್ರೀನಿವಾಸಮೂರ್ತಿ ಕುಲಕರ್ಣಿ, ಗವಿಸಿದ್ದಪ್ಪ ಸಾಹುಕಾರ, ಗುರುನಾಥರೆಡ್ಡಿಿ ದೇಸಾಯಿ, ರಮೇಶ ಶಾಸಿ, ವೆಂಕನಗೌಡ ಬಸಾಪೂರ, ಮಲ್ಲನಗೌಡ ಹಳ್ಳಿಿ, ಅಯ್ಯನಗೌಡ, ವೀರೇಶ ವಿರಕ್ತಮಠ, ಡಾ,ಶರಣಪ್ಪ ಜಾವೂರು, ರಡ್ಡೆೆಪ್ಪ ಕಾಚಾಪೂರ ಅಮರಣ್ಣ ಹಳ್ಳಿಿ, ನಾಗಭೂಷಣ ರೇವಣಿಮಠ, ಶ್ರೀಧರ ಕಿರಗಿ, ಶರಣಗೌಡ ಬಸಾಪೂರ ಸಂಗಣ್ಣ ಮಟ್ಟೂರು, ಮಲ್ಲಣ್ಣ, ಪಂಪಣ್ಣ, ಪ್ರಭು, ಚುನಾಯಿತ ಪ್ರತಿನಿಧಿಗಳು ಗಣ್ಯರು ನೂರಾರು ಯುವಕರು ಸಹಸ್ರಾಾರು ಭಕ್ತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ