Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಬಂಡಿ ಮಹಾಕಾಳಿ ಅಮ್ಮನವರ ಗಿಂಡಿ ಕರಗ ಮಹೋತ್ಸವ

ಸುದ್ದಿಮೂಲ ವಾರ್ತೆ

ರಾಮನಗರ, ಜೂ.25: ಜೂನ್ 27 ಮತ್ತು 28ರಂದು ನಗರದ ಟ್ರೂಪ್‌ಲೇನ್‌ನಲ್ಲಿರುವ ಶ್ರೀ ಬಂಡಿ ಮಹಾಕಾಳಿ ಅಮ್ಮನವರ ಗಿಂಡಿ ಕರಗ ಮಹೋತ್ಸವಕ್ಕೆ ಸಿದ್ದತೆಗಳು ಭರದಿಂದ ನಡೆಯುತ್ತಿದೆ.

ಹಲವಾರು ದಶಕಗಳಿಂದ ಶ್ರೀ ಬಂಡಿ ಮಹಾಕಾಳಿ ಅಮ್ಮನವರ ಉತ್ಸವ ಮತ್ತು ಗಿಂಡಿ ಕರಗ ಉತ್ಸವ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಬಹಳ ಹಿಂದೆ ಬರುತ್ತಿದ್ದ ಮಾರಣಾಂತಿಕ ಕಾಯಿಲೆಗಳಾದ ಕಾಲರಾ, ಪ್ಲೇಗು ಮತ್ತಿತರ ರೋಗಗಳಿಗೆ ಜನರು ತುತ್ತಾಗುತ್ತಿದ್ದರು. ಈ ರೋಗಗಳ ಉಪಶಮನಕ್ಕಾಗಿ ಇಲ್ಲಿ ನೆಲೆಸಿರುವ ಮಹಾಕಾಳಿ ಅಮ್ಮನವರಿಗೆ ಪೂಜೆ ಮಾಡಿದ ನಂತರ ಆಯುರ್ವೇದ ವೈದ್ಯಕೀಯ ಚಿಕಿತ್ಸೆಗಾಗಿ ಜನ ಬಂಡಿಯಲ್ಲಿ ಕೆರೆದುಕೊಂಡು ಹೋಗುತ್ತಿದ್ದರು. ಹೀಗೆ ತನ್ನನ್ನು ಪ್ರಾರ್ಥಿಸಿ ಚಿಕಿತ್ಸೆ ಪಡೆದ ಅನೇಕರನ್ನು ಸಾವಿನ ಅಂಚಿನಿಂದ ಪಾರು ಮಾಡಿದ್ದ ಕಾರಣ ಈ ತಾಯಿಗೆ ಬಂಡಿ ಮಹಾಕಾಳಿ ಎಂಬ ಹೆಸರು ಬಂದಿದೆ ಎಂದು ಸ್ಥಳೀಯರ ನಂಬಿಕೆ.

ರಾಮನಗರದಲ್ಲಿ ಆಷಾಢ ಮಾಸದಲ್ಲಿ ನಗರದಲ್ಲಿ ನೆಲೆಸಿರುವ ನವ ಶಕ್ತಿ ಮಾತೆಯರ ಕರಗ ಮಹೋತ್ಸವ ನಡೆಯುತ್ತಿದ್ದು, ಬಹುಶಃ ಮೈಸೂರು ದಸರಾದ ನಂತರ ಈ ಕರಗ ಮಹೋತ್ಸವಕ್ಕೆ ನಡೆಯುವ ವೈಭವೋಪೇತ ಅಲಂಕಾರಗಳು ನಾಡಿನ ಜನತೆಯ ಗಮನ ಸೆಳೆದಿದೆ ಎಂಬುದು ಸ್ಥಳೀಯ ಅನಿಸಿಕೆ.

ದೇವಸ್ಥಾನದ ಅರ್ಚಕ ಹಾಗೂ ಗಿಂಡಿ ಕರಗಧಾರಕ ಹರೀಶ್ ಸುದ್ದಿಗಾರರೊಂದಿಗೆ ಮಾತನಾಡಿ ಗಿಂಡಿ ಕರಗ ಮಹೋತ್ಸವದ ವೇಳೆ ಇಲ್ಲಿನ ಬಹುತೇಕ ಎಲ್ಲಾ ಜಾತಿ ಮತ್ತು ಧರ್ಮೀಯರು, ಭಾಷಿಕರು ಭಾಗವಹಿಸುತ್ತಾರೆ.

ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಇಷ್ಟಾರ್ಥಗಳನ್ನು ತಾಯಿ ಈಡೇರಿಸುತ್ತಿದ್ದಾಳೆ ಎಂದು ತಿಳಿಸಿದರು.

ಬಂಡಿ ಮಹಾಕಾಳಿ ಅಮ್ಮನವರ ಗಿಂಡಿ ಕರಗ ಮಹೋತ್ಸವದ ಅಂಗವಾಗಿ ನಡೆಯುವ ಅನ್ನ ಸಂರ್ತಪಣೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಎಂ.ಇ.ಐ.ಎಲ್ ಮಾಜಿ ಅಧ್ಯಕ್ಷ ಕೆ. ಶೇಷಾದ್ರಿ (ಶಶಿ) ನಗರಸಭಾ ಸದಸ್ಯರು ಭಾಗವಹಿಸಲಿದ್ದಾರೆ.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ