Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗಣೇಶೋತ್ಸವದಲ್ಲಿ ಭರ್ಜರಿ ಸ್ಟೆಪ್

ಸುದ್ದಿಮೂಲ ವಾರ್ತೆ

ಕೊಪ್ಪಳ,ಅ.3: ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳು ವಿಸರ್ಜನೆಯು ಅದ್ದೂರಿ ನಡೆಯುತ್ತಿವೆ. ಕೊಪ್ಪಳ ನಗರದ ಕಾವ್ಯಾನಂದ ಪಾರ್ಕಿನಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು‌‌ಮಹಾಮಂಡಳದ ಗಣೇಶ ವಿಸರ್ಜನೆಯು ಅದ್ದೂರಿಯಾಗಿ ನಡೆಯಿತು.



ಈ ಸಂದರ್ಭದಲ್ಲಿ ಸಾವಿರಾರು ಮಹಿಳೆಯರು ಭಾಗಿ ಸಕತ್ ಸ್ಟೆಪ್ ಹಾಕಿದರು. ಇದರಲ್ಲಿ ಸಂಸದ ಸಂಗಣ್ಣ ಕರಡಿ ಸೋಸೆ ಮಂಜುಳಾ ಕರಡಿ ಯು ಸಹ ಹೆಜ್ಜೆ ಹಾಕಿದರು. ಮಹಿಳೆಯರ ನಂತರ ಇಳಿವಯಸ್ಸಿನ ಸಂಸದ ಸಂಗಣ್ಣ ಕರಡಿ ಸಹ ಭರ್ಜರಿ ಡ್ಯಾನ್ಸ್ ಮಾಡಿದರು.

ಕೊಪ್ಪಳ ನಗರದಲ್ಲಿ ಬಹುತೇಕ ಗಣೇಶ ಮೂರ್ತಿಗಳು ವಿಸರ್ಜನೆ ಮಾಡಲಾಗಿದೆ. ಕೊನೆಯದಾಗಿ ಹಿಂದು ಮಹಾಸಭಾ ಮಂಡಳಿ ಗಣೇಶ ವಿಸರ್ಜನೆಯು ಸೋಮುವಾರ ಸಂಜೆ ನಡೆಯಿತು. ಪ್ರತಿಷ್ಠಾಪಿಸಿದ 14ನೆಯ ದಿನದಂದು ಗಣೇಶ ವಿಸರ್ಜನೆ ಮಾಡಲಾಯಿತು. ಅಬ್ಬರ ಡಿಜೆ ಸೌಂಡ ಜಗಮಗಿಸುವ ವಿದ್ಯುತ್ ಬೆಳಕಿನಲ್ಲಿ ಸಾವಿರಾರು ಜನರು ಭಾಗಿಯಾಗಿ ಗಣೇಶನಿಗೆ ವಿದಾಯ ಹೇಳಿದರು.

ಇದೇ ಮೆರವಣಿಗೆಯಲ್ಲಿ ಇದೇ ಮೊದಲು ಬಾರಿಗೆ ಸಾವಿರಾರು ಮಹಿಳೆಯರು ಗಣೇಶ ವಿಸರ್ಜನೆಯಲ್ಲಿ ಭಾಗಿಯಾಗಿದ್ದರು. ಮಹಿಳೆಯರು ಹಾಗು ಮಕ್ಕಳು ಡಿಜೆ ಸೌಂಡಿಗೆ ಸಕತ್ ಸ್ಟೆಪ್ ಹಾಕಿದರು. ಇದೇ ವೇಳೆ ಸಂಸದ ಸಂಗಣ್ಣ ಕರಡಿಯವರ ಸೋಸೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭಾವ ಕಂಡಿರುವ ಬಿಜೆಪಿ ಮುಖಂಡರಾದ ಮಂಜುಳಾ ಕರಡಿ ಸಹ ಡಿಜೆ ಸೌಂಡಿಗೆ ಹೆಜ್ಜೆ ಹಾಕಿದರು.

ಸೋಸೆ ಹಾಗು ಮಹಿಳೆಯರ ಕುಣಿತದ ನಂತರ ಮೆರವಣಿಗೆಯಲ್ಲಿ ಭಾಗಿಯಾದ ಸಂಸದ ಸಂಗಣ್ಣ ಇಳಿವಯಸ್ಸಿನಲ್ಲಿ ಸಕತ್ ಸ್ಟೆಪ್ ಹಾಕಿದರು.ಗಣೇಶ ವಿಸರ್ಜನೆಯ ವೇಳೆ ಯುವಕರು ಕುಣಿಯುವ ವೇಳೆಯಲ್ಲಿ ಅವರೊಂದಿಗೆ ತಾವು ಭಾಗಿಯಾಗಿ ಭರ್ಜರಿಯಾಗಿ ಕುಣಿದರು. ಸಂಸದರನ್ನು ಯುವಕರು ಮೇಲಕ್ಕೆ ಎತ್ತಿ ಕುಣಿದು ಕುಪ್ಪಳಿಸಿದರು. 73 ವಯಸ್ಸಿನ ಸಂಗಣ್ಣ ಉತ್ಸಾಹದಿಂದ ಕುಣಿದಿದ್ದು ಮೆರವಣಿಗೆಯಲ್ಲಿ ಉತ್ಸಾಹ ಹೆಚ್ಚಿಸಿತು.

ಗಣೇಶ ವಿಸರ್ಜನೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ 500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ನೀಡಲಾಗಿತ್ತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ