Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಕಿಗಾಹುತಿಯಾದ ಗುಡಿಸಲು : ಸುಭಾಷ್ ಚಂದ್ರ ಭೋಸ್ ಸಂಘದಿಂದ ನೆರವು

 ಸುದ್ದಿಮೂಲ ವಾರ್ತೆ ಔರಾದ್, ಜ.15:
ಪಟ್ಟಣದ ಆದರ್ಶ ವಿದ್ಯಾಾಲಯ ಸಮೀಪದ ಅಲೆಮಾರಿ ಜನಾಂಗದ ಪುಲುಬಾಯಿ ಹಿಮತ್ ವಾಘಮಾರೆ ಅವರ ಗುಡಿಸಲು ಇತ್ತೀಚೆಗೆ ಆಕಸ್ಮಿಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಅಲೆಮಾರಿ ಕುಟುಂಬ ಸಂಕಷ್ಟಕ್ಕೆೆ ಸಿಲುಕಿರುವ ಸುದ್ದಿ ತಿಳಿದ ತಕ್ಷಣ ಸುಭಾಷ್ ಚಂದ್ರ ಬೋಸ್ ಯುವಕ ಸಂಘದ ಕಾರ್ಯಕರ್ತರು ಸ್ಥಳಕ್ಕೆೆ ಭೇಟಿ ನೀಡಿ ನೆರವು ನೀಡಿದ್ದಾರೆ.
ಸಂಘದ ತಾಲೂಕು ಅಧ್ಯಕ್ಷ ರತ್ನದೀಪ ಕಸ್ತೂರೆ ನೇತೃತ್ವದಲ್ಲಿ ಸಂಘದ ಕಾರ್ಯಕರ್ತರು ಕುಟುಂಬಕ್ಕೆೆ ಅಗತ್ಯವಿರುವ 25 ಕೆ.ಜಿ ಅಕ್ಕಿಿ, ಅಡುಗೆ ಎಣ್ಣೆೆ, ಉಪ್ಪುು, ಖಾರಾ, ಮಸಾಲಾ ಸೇರಿದಂತೆ ಆಹಾರ ಸಾಮಗ್ರಿಿಗಳ ಕಿಟ್ ವಿತರಿಸಿದೆ.
ಅಲ್ಲದೆ, ಸುಟ್ಟುಹೋದ ಗುಡಿಸಲನ್ನು ಮರು ನಿರ್ಮಿಸಲು ಅಗತ್ಯವಿರುವ ಕಟ್ಟಿಿಗೆ, ತಾಡಪತ್ರಿಿ, ಹಗ್ಗ ಸೇರಿದಂತೆ ಇತರೆ ಸಾಮಗ್ರಿಿಗಳನ್ನು ಒದಗಿಸಿ ಸಂಕಷ್ಟದಲ್ಲಿರುವ ಕುಟುಂಬಕ್ಕೆೆ ಆಸರೆಯಾಗಿ ನಿಂತಿದ್ದಾರೆ. ಸಂಘದ ಈ ಮಾನವೀಯ ಕಾರ್ಯಕ್ಕೆೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುಡಿಸಲಿನಲ್ಲಿದ್ದ ದವಸ ಧಾನ್ಯಗಳು, ದಿನಸಿ ಸಾಮಾಗ್ರಿಿಗಳು, ಬಟ್ಟೆೆ ಬರೆ ಸೇರಿದಂತೆ ಬದುಕಿಗೆ ಅಗತ್ಯವಾಗಿದ್ದ ಎಲ್ಲ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಇದಲ್ಲದೆ, ಮಗನ ಮದುವೆಗಾಗಿ ಅಕ್ಕಿಿ ಚೀಲದಲ್ಲಿ ಸಂಗ್ರಹಿಸಿಟ್ಟಿಿದ್ದ ಸುಮಾರು 55 ಸಾವಿರ ರೂ. ನಗದು ಹಣವೂ ಬೆಂಕಿಗೆ ಸುಟ್ಟು ನಾಶವಾಗಿದೆ. ಚಳಿಗಾಲದ ಈ ಸಮಯದಲ್ಲಿ ತಲೆಮೇಲೆ ಸೂರು ಇಲ್ಲದೆ, ಆಹಾರ ಧಾನ್ಯಗಳಿಲ್ಲದೆ ಪುಲುಬಾಯಿ ಕುಟುಂಬ ತೀವ್ರ ಸಂಕಷ್ಟಕ್ಕೆೆ ಸಿಲುಕಿದೆ. ಕೂಡಲೇ ತಾಲೂಕು ಆಡಳಿತ ಕುಟುಂಬದ ನೆರವಿಗೆ ಬರಬೇಕು ಎಂದು ಸಂಘದ ಕಾರ್ಯಕರ್ತರು ಒತ್ತಾಾಯಿಸಿದ್ದಾರೆ.
ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಸುನಿಲ ಜಿರೋಬೆ, ದಲಿತ ಸೇನೆ ತಾಲೂಕು ಅಧ್ಯಕ್ಷ ಸುನಿಲ ಮಿತ್ರಾಾ, ಮಾಜಿ ಯುವ ಕಾಂಗ್ರೆೆಸ್ ಅಧ್ಯಕ್ಷ ದತ್ತಾಾತ್ರಿಿ ಬಾಪುರೆ, ಎನ್ ಎಸ್ ಯುಐ ತಾಲೂಕು ಅಧ್ಯಕ್ಷ ಚಂದು ಡಿಕೆ, ಸುಭಾಷ್ ಚಂದ್ರಬೋಸ್ ಯುವಕ ಸಂಘದ ಕಾರ್ಯದರ್ಶಿ ವಿಶ್ವದೀಪ ಕಸ್ತೂರೆ, ಅಜಯ ವರ್ಮಾ, ರೋಹಿತ ಕಾಂಬಳೆ, ಆನಂದ ಕರಬಾಳೆ ಸೇರಿದಂತೆ ಸೇರಿದಂತೆ ಅನೇಕರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ