Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಸಿಲಿನಿಂದ ಚರ್ಮದ ಕಾಂತಿ ಉಳಿಸಿಕೊಳ್ಳಲು ಇಲ್ಲಿದೆ ಸುಲಭ ವಿಧಾನ

ಬೆಂಗಳೂರು,ಏ.27:  ದಿನ ಕಳೆದಂತೆ ಹೆಚ್ಚುತ್ತಿರುವ ತಾಪಮಾನಕ್ಕೆ ಚರ್ಮದ ಹಾಳಾಗುತ್ತಿದ್ದು, ಸೂರ್ಯನ ಶಾಖದಿಂದ ತ್ವಚೆಯ ಕಾಂತಿಯನ್ನು ಉಳಿಸಿಕೊಳ್ಳುವುದು ಮಹಿಳೆಯಾರಿಗೆ ಬಹು ದೊಡ್ಡ ಸವಾಲಾಗಿದೆ.

ಮಹಿಳೆಯರು ಈ ಬೇಸಿಗೆ ಕಾಲದಲ್ಲಿ ಚರ್ಮದ ಕಾಂತಿಯನ್ನು ಉಳಿಕೊಳ್ಳಲು ಹರಸಾಹಸ ಪಡುತ್ತಾರೆ. ಬಿಸಿಲಿನಿಂದ ಹೇಗಪ್ಪ ಚರ್ಮ ಕಾಪಾಡಿಕೊಳ್ಳುವುದು ಎಂಬ ಚಿಂತೆಗೆ ಗುರಿಯಾಗುತ್ತಾರೆ.



ಅವರಿಗೊಂದು ಸುಲಭ ವಿಧಾನ ಮನೆಯಲ್ಲಿಯೇ ದೊರೆಯುವಂತಹ ಕೆಲವು ಪದಾರ್ಥಗಳನ್ನು ಬಳಸುವುದು ಮತ್ತು ಬಟ್ಟೆಗಳ ಬಳಕೆಯಲ್ಲಿ ಬದಲಾವಣೆಯ ಮೂಲಕ ಚರ್ಮದ ಹಾರೈಕೆ ಮಾಡಿಕೊಳ್ಳಬಹುದು.

ಸೂರ್ಯನಿಂದ ಹೊರಸೂಸುವ ಬೆಳಕಿನಲ್ಲಿರುವ ಕಿರಣಗಳು ನಮ್ಮ ಚರ್ಮದ ಕೋಶಗಳಿಗೆ ಹಾನಿ ಮಾಡುತ್ತವೆ. ಹೀಗಾಗಿ ಸ್ಕಿನ್ ಟ್ಯಾನ್ ಉಂಟಾಗುತ್ತೆ. ಇದರಿಂದ ನಮ್ಮ ಚರ್ಮವು ಒಣ್ಣಗಿದಂತೆ, ಕಪ್ಪಾಗಿ ಕಾಣುತ್ತದೆ, ತ್ವಚೆಯ ಬಣ್ಣ ಬದಲಾಗುತ್ತದೆ. ಮುಖದ ಭಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಆದರಿಂದ ಮುಖದ ಕಾಂತಿಯಲ್ಲಿ ಬದಲಾವಣೆಯಾಗುತ್ತದೆ. ಸೂರ್ಯನ ಕಿರಣಗಳಿಂದ ಕಪ್ಪಾಗುವುದನ್ನು ಅಲ್ಪ ಮಟ್ಟಿಗೆ ತಡೆಗಟ್ಟಲು ಈ ವಿಧಾನಗಳನ್ನು ಅನುಸರಿಸಬಹುದು.



ಚರ್ಮದ ಕಾಂತಿ ಉಳಿಸಿಕೊಳ್ಳಲು ಇಲ್ಲಿದೆ ಸುಲಭ ವಿಧಾನ: ಬಿಸಿಲಿನಲ್ಲಿ ಸುತ್ತಾಡುವವರು ಹೆಚ್ಚು ತುಂಬು ತೋಳಿನ ಬಟ್ಟೆ ಧರಿಸುವುದರಿಂದ ಸೂಕ್ತ. ಸೂರ್ಯನ ಕಿರಣಗಳು ನೇರವಾಗಿ ಚರ್ಮದ ಮೇಲೆ ಪ್ರಭಾವ ಬೀರುವುದನ್ನು ಸ್ಪಲ್ಪ ಮಟ್ಟಿಗೆಯಾದರು ತಡೆಗಟ್ಟಲು ಈ ಅಂಶ ಸಹಕಾರಿಯಾಗುತ್ತದೆ.

ಹೆಚ್ಚು ಪಾನೀಯಗಳನ್ನು, ಹಣ್ಣು, ನೀರಿನ ಅಂಶಗಳನ್ನು ಒಳಗೊಂಡಂತಹ ತರಕಾರಿ, ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ದೇಹ ತಪ್ಪಾಗಿರುತ್ತದೆ. ಈ ವಿಧಾನದಿಂದ ದೇಹದ ತಾಪವನ್ನು ಕಡಿಮೆಗೊಳಿಸುವುದರ ಮೂಲಕ ಚರ್ಮದ ಕಾಂತಿಯನ್ನು ಉಳಿಸಿಕೊಳ್ಳಬಹುದು.

ಬೇಸಿಗೆ ಸಂದರ್ಭದಲ್ಲಿ ತ್ವಚೆಗೆ ಬೇಕಾಗುವಂತಹ ಕೆಲವು ಲೇಪನಗಳು ಮುಖದ ಕಾಂತಿ ಉಳಿಸಲು ಸಹಕಾಯಿಯಾಗುತ್ತದೆ. ಮನೆಯಲ್ಲಿಯೇ ದೊರೆಯುವಂತಹ ಪದಾರ್ಥಗಳಿಂದ ಮುಖದ ಕಾಂತಿ ಹಿಂಪಡೆಯಬಹುದು.



ಮೊಸರು ಅಥವಾ ಹಾಲು, ಕಡ್ಲೆಹಿಟ್ಟು ಮತ್ತು ಅರಿಶಿಣ ಬೆರಸಿ ಮುಖಕ್ಕೆ ಲೇಪಿಸಿ, ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಮುಖಕ್ಕೆ ಸೌತೆಕಾಯಿ, ಮೊಸರು ಲೇಪನವನ್ನು ಬೆರೆಸಿದರೆ ತಂಪಾಗುತ್ತದೆ.
ಜೇನು ತುಪ್ಪ, ಕಡ್ಲೆಹಿಟ್ಟು ಮತ್ತು ಅರಿಸಿಣ ಬೆರಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಿಸಲು ಸಹಕಾರಿಯಾಗುತ್ತದೆ.

ಉಗುರು ಬೆಚ್ಚಗಿನ ಬಿಸಿಯ ನೀರಿಗೆ ಅರ್ಧ ಚಮಚ ಎಣ್ಣೆ ಹಾಕಿ ಕೈಕಾಲುಗಳಿಗೆ ಮಸಾಜ್ ಮಾಡಿಕೊಳ್ಳುವುದರಿಂದ ಚರ್ಮ ಕಾಂತಿಯುತವಾಗಿ ಕಾಣಲು ಉಪಯುಕ್ತವಾಗುತ್ತದೆ ಮತ್ತು ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಧೂಳು ಮುಖ, ಶರೀರದ ಮೇಲೆ ಅಂಟಿಕೊಂಡಿರುತ್ತದೆ. ಅದಕ್ಕೆ ಕನಿಷ್ಠ ದಿನಕ್ಕೆರಡು ಬಾರಿ ತಣ್ಣೀರಿನಿಂದ ಮುಖ ತೊಳೆಯುತ್ತಿರುವುದು ಸೂಕ್ತ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ