Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೊಳಕೆರಾಗೆ ಐಜಿಪಿ - ಎಸ್‌ಪಿ ದೌಡು ಕೆಮಿಕಲ್ ಡ್ರಮ್ ಸ್ಫೋಟ ? : 6 ಮಂದಿಗೆ ಗಂಭೀರ ಗಾಯ

 ಸುದ್ದಿಮೂಲ ವಾರ್ತೆ ಹುಮನಾಬಾದ್, ಜ.31:
ತಾಲೂಕಿನ ರಾಷ್ಟ್ರೀಯ ಹೆದ್ದಾಾರಿಯಲ್ಲಿರುವ ಮೊಳಕೆರಾ ಗ್ರಾಾಮದಲ್ಲಿ ಶನಿವಾರ ಬೆಳಗ್ಗೆೆ 8 ಗಂಟೆಗೆ ನಿಗೂಢವಾಗಿ ಸಂಭವಿಸಿದ ಸ್ಫೋೋಟಕ್ಕೆೆ 4 ಜನ ಶಾಲಾ ಮಕ್ಕಳು ಸೇರಿ 6 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಕೆಮಿಕಲ್ ತುಂಬಿದ ಡ್ರಮ್ ಸ್ಫೋೋಟಗೊಂಡು ಈ ಘಟನೆ ನಡೆದಿದೆ ಎಂದು ಪ್ರಾಾಥಮಿಕ ತನಿಖೆಯಿಂದ ಪತ್ತೆೆಯಾಗಿದೆ ಎಂದು ಜಿಲ್ಲಾ ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಸುದ್ದಿ ಗ್ರಾಾಮದಲ್ಲಿ ಹಾಗೂ ಜಿಲ್ಲೆಯಲ್ಲಿ ವ್ಯಾಾಪಕವಾಗಿ ಹರಡಿದೆ. ಘಟನೆಯಿಂದ ಮೊಳಕೆರಾ ಗ್ರಾಾಮಸ್ಥರು ಬೆಚ್ಚಿಿಬಿದ್ದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸುದ್ದಿ ತಿಳಿಯುತ್ತಿಿದ್ದಂತೆ ಘಟನಾ ಸ್ಥಳಕ್ಕೆೆ ಬಾಂಬ್ ನಿಷ್ಕ್ರಿಿಯ ತಂಡ, ಬೆರಳಚ್ಚು ತಜ್ಞರು, ಶ್ವಾಾನದಳ, ಾರೆನ್ಸಿಿಕ್ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ವ್ಯಕ್ತಿಿಯೊಬ್ಬರು ಕಸದ ಡಬ್ಬ ಸ್ಪೋೋಟಗೊಂಡು ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಗಾಯಗೊಂಡವರ ಚಪ್ಪಲಿ, ಮಕ್ಕಳ ಶಾಲಾ ಟಿಫಿನ್ ಬ್ಯಾಾಗ್ ಕಂಡು ಬಂದಿವೆ.
ಅಧಿಕಾರಿಗಳ ಮೂಲಗಳ ಪ್ರಕಾರ ಪ್ರಾಾಥಮಿಕ ಪರಿಶೀಲನೆಯಲ್ಲಿ ಕೆಮಿಕಲ್ ಅಂಶ ಪತ್ತೆೆಯಾಗಿದೆ ಎನ್ನಲಾಗಿದ್ದು, ಹೈಡ್ರೋೋಜನ್ ಪೆರಾಕ್ಸೈಡ್ ಹಾಗೂ ಥಿನ್ನರ್ ಬಳಕೆಯಿಂದ ಸ್ಪೋೋಟಗೊಂಡಿರಬೇಕು ಎಂದು ಅನುಮಾನಿಸಲಾಗುತ್ತಿಿದೆ. ಈ ಕುರಿತು ಅಧಿಕಾರಿಗಳ ತಂಡ ಹೆಚ್ಚಿಿನ ಪರಿಶೀಲನೆ ನಡೆಸುತ್ತಿಿದ್ದಾಾರೆ. ವಿವಿಧ ಪ್ರಯೋಗಗಳು ಸ್ಥಳದಲ್ಲಿಯೇ ನಡೆಸುತ್ತಿಿದ್ದಾರೆ. ಅಧಿಕಾರಿಗಳ ಪೂರ್ಣ ಪರಿಶೀಲನೆ ನಂತರ ಖಚಿತ ಮಾಹಿತಿ ಹೊರಬರಲಿದೆ.
ಘಟನೆಯ ಮಾಹಿತಿ ಪಡೆದ ಕಲ್ಬುರ್ಗಿ ಐಜಿಪಿ ಶಾಂತನು ಸಿನ್ಹಾಾ ಮೊಳಕೆರಾ ಗ್ರಾಾಮಕ್ಕೆೆ ಭೇಟಿ ನೀಡಿ ಬೀದರ ಎಸ್‌ಪಿ ಪ್ರದೀಪ ಗುಂಟಿ ಅವರಿಂದ ಘಟನೆಯ ವರದಿ ಪಡೆದರು.
ಘಟನೆಯಲ್ಲಿ ಅನವರ್ ಜಮೀರ್ ಸಾಬ್ (19), ಜಬ್ಬರ್ ರಜಾಕ್ (60), ಶಾಲಾ ವಿದ್ಯಾಾರ್ಥಿಗಳಾದ ಬುಸೇರಾ ಅಲ್ಲಾಾವೊದ್ದೀನ್ (4), ಆರೀಜ್ ರಜಾಕ್ ಸಾಬ್ (4), ಅರ್ಜಾನ್ ರಜಾಕ್ (7), ಮಸ್ತಾಾನ್ ಮುಸಾ (8) ಎಂಬುವವರಿಗೆ ಗಾಯಗಳಾಗಿವೆ. ಇಬ್ಬರ ಸ್ಥಿಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡವರು ಹುಮನಾಬಾದ್ ಸರ್ಕಾರಿ ಆಸ್ಪತ್ರೆೆಯಲ್ಲಿ ಪ್ರಥಮ ಚಿಕಿತ್ಸೆೆ ನೀಡಿ ಹೆಚ್ಚಿಿನ ಚಿಕಿತ್ಸೆೆಗಾಗಿ ಬೀದರ ಬ್ರಿಿಮ್ಸ್, ಗುರುನಾನಕ್ ಹಾಗೂ ಹೈದ್ರಾಾಬಾದ್ ಮತ್ತು ಸೊಲ್ಲಾಾಪೂರ್ ಖಾಸಗಿ ಆಸ್ಪತ್ರೆೆಗಳಲ್ಲಿ ಚಿಕಿತ್ಸೆೆ ಪಡೆಯುತ್ತಿಿದ್ದಾರೆ.
ಸಹಾಯಕ ಆಯುಕ್ತ ಪ್ರಕಾಶ್ ಕುದುರಿ, ತಹಸಿಲ್ದಾಾರ್ ಅಂಜುಮ್ ತಬಾಸುಮ್, ಡಿವೈಎಸ್‌ಪಿ ಮಡೋಳಪ್ಪ, ಸಿಪಿಐ ಸಂತೋಷ ತಟ್ಟಪಳ್ಳಿಿ, ವಿದ್ಯುತ್ ಇಲಾಖೆಯ ಅಧಿಕಾರಿಗಳಾದ ಗುರುಶಾಂತ ವಾರದ, ರಮೇಶ್ ಮೈನಹಳ್ಳೆೆ, ತಾಲೂಕು ಪಂಚಾಯತ್ ಇ ಓ ದೀಪಿಕಾ ನಾಯ್ಕರ್, ಪಿಡಿಒ ವಿಜಯಲಕ್ಷ್ಮಿಿ, ಪಿಎಸ್‌ಐ ಸುರೇಶಕುಮಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಇದ್ದರು.
ಮೊಳಕೆರಾದಲ್ಲಿ ಸ್ಪೋೋಟ ಇದೇ ಮೊದಲಲ್ಲ...
ಕಳೆದ ಕೆಲ ತಿಂಗಳ ಹಿಂದೆ ಇದೇ ಗ್ರಾಾಮದಲ್ಲಿ ಶಾಲಾ ವಿದ್ಯಾಾರ್ಥಿಯೊಬ್ಬನ ಚಪ್ಪಲಿಯಲ್ಲಿ ಸ್ಫೋೋಟಗೊಂಡು ಕಾಲು ಕಳೆದುಕೊಂಡಿದ್ದ. ಅಲ್ಲದೆ ಕಳೆದ ವಾರ ಗ್ರಾಾಮದಲ್ಲಿ ಭಾರೀ ಸದ್ದೊಂದು ಕೇಳಿ ಬಂದಿದೆ ಎಂದು ಗ್ರಾಾಮಸ್ಥರು ಮಾಧ್ಯಮದವರಿಗೆ ತಿಳಿಸಿದ್ದಾಾರೆ. ಗ್ರಾಾಮಸ್ಥರ ಮಾಹಿತಿ ಪ್ರಕಾರ ಶನಿವಾರ ಸಂಭವಿಸಿದ ಸ್ಪೋೋಟವು ಐದನೇ ಬಾರಿ ಘಟಿಸಿದೆ. ಆದರೆ, ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ನಿರ್ಲಕ್ಷ ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಬಗ್ಗೆೆ ಗ್ರಾಾಮಸ್ಥರಿಗೂ ನಿಖರ ಕಾರಣ ಗೊತ್ತಿಿಲ್ಲ.
ಉನ್ನತ ತನಿಖೆಗೆ ಶಾಸಕ ಪಾಟೀಲ್ ಆಗ್ರಹ
ಮೊಳಕೆರಾದಲ್ಲಿ ಸಂಭವಿಸಿದ ನಿಗೂಢ ಸ್ಪೋೋಟ ಸಂಬಂಧಿಸಿದಂತೆ ಹುಮ್ನಾಾಬಾದ್ ಶಾಸಕ ಸಿದ್ದು ಪಾಟೀಲ್ ಗ್ರಾಾಮಕ್ಕೆೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆಯೂ ಇಂಥದ್ದೇ ಘಟನೆ ನಡೆದಿದೆ. ಆದರೆ, ಘಟನೆಗೆ ನಿಖರ ಕಾರಣವನ್ನು ಅಧಿಕಾರಿಗಳು ಪತ್ತೆೆ ಮಾಡಿಲ್ಲ. ಈಗ ಮತ್ತೆೆ ಮತ್ತೊೊಂದು ಅವಘಢ ಸಂಭವಿಸಿದ್ದು, ಈ ಬಗ್ಗೆೆ ಜಿಲ್ಲಾಡಳಿತ ಉನ್ನತ ಮಟ್ಟದ ತನಿಖೆ ನಡೆಸಿ ಘಟನೆಗೆ ಕಾರಣರಾದವರನ್ನು ಪತ್ತೆೆ ಮಾಡಬೇಕು ಎಂದು ಮಾಧ್ಯಮಗಳ ಮೂಲಕ ಒತ್ತಾಾಯಿಸಿದ್ದಾರೆ.
ಗಾಯಾಳು ಆರೋಗ್ಯ ವಿಚಾರಿಸಿದ ಡಿಸಿ
ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಾಮದಲ್ಲಿ ಅಕಸ್ಮಿಿಕವಾಗಿ ಸ್ಫೋೋಟದಲ್ಲಿ ಗಾಯಗೊಂಡು ಹೈದ್ರಾಾಬಾದ್ ಮಲ್ಲರೆಡ್ಡಿಿ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ಪಡೆಯುತ್ತಿಿರುವ ಜಬ್ಬಾಾರ ಎಂಬುವವರನ್ನು ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಕುಟುಂಬ ಸದಸ್ಯರಿಗೆ ಸಾಂತ್ವಾಾನ ಹೇಳಿದರು.
ಮೊಳಕೆರಾಗೆ ಸಚಿವ ಖಂಡ್ರೆೆ ಭೇಟಿ
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆೆ ಅವರು ೆ.1 ರಂದು ಬೆಳಿಗ್ಗೆೆ 10ಕ್ಕೆೆ ಹುಮನಾಬಾದ ತಾಲ್ಲೂಕಿನ ಮೊಳಕೇರಾ ಗ್ರಾಾಮಕ್ಕೆೆ ಭೇಟಿ ನೀಡಲಿದ್ದಾರೆ.
ಶನಿವಾರ ಸಂಭವಿಸಿದ ನಿಗೂಢ ಸ್ಪೋೋಟ ಘಟನೆ ಹಿನ್ನಲೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ತನಿಖೆಗೆ ಖಂಡ್ರೆೆ ಆದೇಶ
ಹುಮನಾಬಾದ್ ತಾಲೂಕು ಮೊಳಕೇರಾ ಗ್ರಾಾಮದ ಮೋಳಗಿ ಮಾರಯ್ಯ ದೇವಸ್ಥಾಾನ ರಸ್ತೆೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋೋಟಗೊಂಡು ಶಾಲೆಗೆ ತೆರಳುತ್ತಿಿದ್ದ ಮಕ್ಕಳೂ ಸೇರಿ 6 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಬಗ್ಗೆೆ ಆಘಾತ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ತನಿಖೆಗೆ ಆದೇಶ ನೀಡಿದ್ದಾರೆ.
ಕೂಡಲೇ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆೆ ಕೊಡಿಸಲು ಮತ್ತು ಚಿಕಿತ್ಸಾಾ ವೆಚ್ಚ ಭರಿಸಲು ಜಿಲ್ಲಾಡಳಿತಕ್ಕೆೆ ಸೂಚಿಸಿರುವ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಮತ್ತು ಸ್ಫೋೋಟಕ ಪರೀಕ್ಷಾ ತಜ್ಞರನ್ನು ಸ್ಥಳಕ್ಕೆೆ ಕಳುಹಿಸಿ ಸ್ಫೋೋಟ ಸ್ಥಳದಲ್ಲಿ ಮಾದರಿ ಸಂಗ್ರಹಿಸಿ ತನಿಖೆ ಮಾಡಲು ಆದೇಶಿಸಿದ್ದಾರೆ.
ಸ್ಫೋೋಟಕ್ಕೆೆ ಕಾರಣವೇನು, ಸ್ಫೋೋಟಕ್ಕೆೆ ಬಳಕೆಯಾಗಿರುವ ವಸ್ತು ಯಾವುದು, ಆ ಸ್ಫೋೋಟಕ ವಸ್ತು ಅಲ್ಲಿಗೆ ಹೇಗೆ ಬಂತು, ಯಾವ ಉದ್ದೇಶಕ್ಕೆೆ ಅದು ಬಳಕೆಯಾಗಿತ್ತು ಎಂಬ ಬಗ್ಗೆೆ ಸಮಗ್ರ ತನಿಖೆ ನಡೆಸಿ, ಸ್ಫೋೋಟಕ್ಕೆೆ ಕಾರಣರಾದವರ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಲು ಈಶ್ವರ ಖಂಡ್ರೆೆ ಸೂಚಿಸಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ