Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿ ಗಲಭೆ : ಎಸ್‌ಪಿ ಅಮಾನತು ಬದಲು, ಡಿವೈಎಸ್‌ಪಿ ಅಮಾನತಾಗಲಿ

ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.03:
ಗುರುವಾರ ಸಂಜೆ ನಡೆದ ಬ್ಯಾಾನರ್ ಗಲಾಟೆಗೆ ಸಂಬಂಧಿಸಿದಂತೆ ನೂತನ ಎಸ್ಪಿಿ ಪವನ್ ನೆಜ್ಜೂರ್ ಅವರ ಅಮಾನತಿಗೆ ಬದಲು, ನಗರ ಡಿವೈಎಸ್ಪಿಿ ಅವರನ್ನು ಅಮಾನತು ಮಾಡಬೆಕು ಮತ್ತು ದ್ವೇಷ ಭಾಷಣ ವಿರೋಧಿ ಮಸೂದೆ (ಬಿಲ್) ಅಡಿಯಲ್ಲಿ ಶಾಸಕ ನಾರಾ ಭರತರೆಡ್ಡಿಿ ಅವರನ್ನು ಸರ್ಕಾರ ಬಂಧಿಸದಿದ್ದಲ್ಲಿ ಬಳ್ಳಾಾರಿಯಿಂದ ಬೆಂಗಳೂರಿಗೆ ಪಾದಯಾತ್ರೆೆ ನಡೆಸುವುದಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ತಿಳಿಸಿದ್ದಾಾರೆ.
ಶನಿವಾರ ಬೆಳಿಗ್ಗೆೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪವನ್ ನೆಜ್ಜೂರ್ ಅವರು ಕರ್ತವ್ಯಕ್ಕೆೆ ವರದಿ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ. ಈ ಘಟನೆಗೆ ಪವನ್ ಅವರನ್ನು ಹೊಣೆಗಾರರನ್ನಾಾಗಿ ಮಾಡಿದ್ದು ಸರ್ಕಾರದ ತಪ್ಪುು ನಿರ್ಧಾರ. ಗಲಭೆ ನಡೆದ ಸ್ಥಳವು ಡಿವೈಎಸ್ಪಿಿ ಚಂದ್ರಕಾಂತ ನಂದರೆಡ್ಡಿಿ ಅವರ ವ್ಯಾಾಪ್ತಿಿಗೆ ಬರಲಿದೆ. ಕಾರಣ ಅವರನ್ನೇ ಹೊಣೆಗಾರರನ್ನಾಾಗಿ ಮಾಡಬೇಕು ಎಂದರು.
ಬಳ್ಳಾಾರಿಯು ರಿಪಬ್ಲಿಿಕ್ ಕಾಂಗ್ರೆೆಸ್ ಆಗಿದೆ. ಮಹರ್ಷಿ ವಾಲ್ಮೀಕಿ ಹೆಸರಲ್ಲಿ ರಾಜಕೀಯ ನಡೆದಿದೆ. ವಾಲ್ಮೀಕಿ ಅಭಿವೃದ್ಧಿಿ ನಿಗಮದ ಹಗರಣ ಏನಾಯಿತು. ಶಾಸಕ ಜಿ. ಜನಾರ್ಧನರೆಡ್ಡಿಿ ಅವರಿಗೆ ಹೆಚ್ಚಿಿನ ಭದ್ರತೆ ನೀಡಬೇಕು. ಶಾಸಕ ಬಿ. ನಾಗೇಂದ್ರ ಅವರು ಬಳ್ಳಾಾರಿಯನ್ನು ಬಿಹಾರ ಮಾಡಲು ಯತ್ನಿಿಸಿದ್ದಾಾರೆ ಎಂದು ಆರೋಪಿಸಿದರು.
‘ರೌಡಿ ನಾಗೇಂದ್ರ, ಶಾಸಕರಾಗಿದ್ದು ನಮ್ಮಿಿಂದ’
ಮಾಜಿ ಸಚಿವ, ಶಾಸಕ ಬಿ. ನಾಗೇಂದ್ರ ರೌಡಿ. ಬಿ. ನಾಗೇಂದ್ರನನ್ನು ರಾಜಕೀಯಕ್ಕೆೆ ಕರೆದುಕೊಂಡು ಬಂದು, ಶಾಸಕರನ್ನಾಾಗಿ ಮಾಡಿದ್ದು ಬಿ. ಶ್ರೀರಾಮುಲು. ಈಗ, ಬಿ. ಶ್ರೀರಾಮುಲು ವಿರುದ್ಧ ಮಾತನಾಡುವ ಬಿ. ನಾಗೇಂದ್ರ, ಶ್ರೀರಾಮುಲುನ ಕಾಲಿನ ಧೂಳಿಗೂ ಸಮವಲ್ಲ ಎಂದು ಶಾಸಕ ಜಿ. ಜನಾರ್ಧನರೆಡ್ಡಿಿ ಅವರು ಟೀಕಿಸಿದ್ದಾಾರೆ.
ಬಿ. ನಾಗೇಂದ್ರನಿಗೆ ಆತ್ಮಸಾಕ್ಷಿ ಇದ್ದಲ್ಲಿ ಗುರುವಾರ ಸಂಜೆ ನಡೆದ ಘಟನೆಯಲ್ಲಿ ನಮ್ಮ ಮನೆಯ ಮೇಲೆ ಕಲ್ಲು ತೂರಿರುವ ಶಾಸಕ ನಾರಾ ಭರತರೆಡ್ಡಿಿಯ ಕ್ರಮವನ್ನು ಸಮರ್ಥನೆ ಮಾಡಿಕೊಂಡಿರುವುದು ಸರಿಯೇ? ವಾಲ್ಮೀಕಿ ಹಗರಣದಲ್ಲಿ ಸಿಕ್ಕಿಿಕೊಂಡಿರುವ ಬಿ. ನಾಗೇಂದ್ರ ಹೊರಬರಲು ಸಾಧ್ಯವಿಲ್ಲ. ಬಿ. ನಾಗೇಂದ್ರನ ರಾಜಕೀಯ ಮುಗಿದ ಕಥೆಯಾಗಿದೆ.
ನಗರ ಡಿವೈಎಸ್ಪಿಿ ಚಂದ್ರಕಾಂತ ನಂದರೆಡ್ಡಿಿ ಅವರು ಶಾಸಕ ನಾರಾ ಭರತರೆಡ್ಡಿಿ ಅವರನ್ನು ಎಸ್ಕಾಾರ್ಟ್‌ನಲ್ಲಿ ಎಸ್ಪಿಿ ಸರ್ಕಲ್‌ನಿಂದ ನಮ್ಮ ಮನೆಯವರೆಗೆ ಕರೆದುಕೊಂಡ ಬಂದು, ಇಡೀ ಗಲಭೆಗೆ ಕಾರಣವಾಗಿದ್ದಾಾರೆ. ಕಾರಣ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಅಷ್ಟೇ ಅಲ್ಲ, ಶಾಸಕ ನಾರಾ ಭರತರೆಡ್ಡಿಿ ಅವರು ಮಿಲ್ಲರಪೇಟೆಯ ದೌಲ ಅವರ ಮೂಲಕ ನಗರಾದ್ಯಂತ ಗಾಂಜಾ ವ್ಯವಹಾರ ನಡೆಸುತ್ತಿಿದ್ದಾಾರೆ ಎಂದು ದೌಲ ಮತ್ತು ಶಾಸಕರು ಇರುವ ವೀಡಿಯೋವನ್ನು ಪ್ಲೇ ಮಾಡಿ, ತೋರಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ