Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೊಡಲ್ಲ ಅಂದ್ರ ಕೊಡಲ್ಲ ನಾಟಕ ಪ್ರದರ್ಶನ

ಸುದ್ದಿಮೂಲ ವಾರ್ತೆ ಮಸ್ಕಿ, ಜ.11:
ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾಾನದಲ್ಲಿ ಶನಿವಾರ ಶಕೀಲ್ ಅಹ್ಮದ್ ನಿರ್ದೇಶನದ ನಿರ್ದಿಗಂತ ತಂಡ ಮೈಸೂರ ಪ್ರಸ್ತುತಪಡಿಸಿರುವ ಕೊಡಲ್ಲ ಅಂದ್ರೆೆ ಕೊಡಲ್ಲ’ ನಾಟಕ ಪ್ರದರ್ಶನದೊಂದಿಗೆ ಶನಿವಾರ, ತೆರೆಬಿತ್ತು.ಉಚಿತವಾಗಿ ಪ್ರದರ್ಶಿಸಿದ ಕೊಡಲ್ಲ ಅಂದ್ರೆೆ ಕೊಡಲ್ಲ’ ನಾಟಕ ತೆರಿಗೆಯಿಂದ ಜನಸಾಮಾನ್ಯರು ಅನುಭವಿಸುತ್ತಿಿರುವ ಸಂಕಷ್ಟವನ್ನು ವಿಡಂಬನಾತ್ಕಕ ನಾಟಕ ಬಿಂಬಿಸಿತು.
ಮಸ್ಕಿಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ , ಸರ್ಕಾರಿ ನೌಕರರ ಸಂಘ, ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು,ಸಾವಿತ್ರಿಿಬಾಯಿ ುಲೆ ಶಿಕ್ಷಕಿಯರ ಸಂಘ, ಲಯನ್ಸ ಕ್ಲಬ್, ಇತ್ಲಿಿ ೌಂಡೇಶನ್ ಸಹಯೋಗದಲ್ಲಿ ಜರುಗಿದ ನಾಟಕದಲ್ಲಿ ರಂಗ ಕಲಾವಿದರಾದ ಹುಬ್ಬಳ್ಳಿಿ ಮಂಜುನಾಥ ಮಡಲಗಿರಿ, ಧಾರವಾಡ ಸಲ್ಮಾಾ ದಂಡಿನ್, ಮಂಗಳೂರು ಚರಿತ್ ಸುವರ್ಣ, ಶಿವಮೊಗ್ಗ ದಿನೇಶ್ ನಾಯ್ಕ, ಚರಿತ್ ಶಾರದಾ ಉಡುಪಿ ಅವರ ವಿವಿಧ ಪಾತ್ರಗಳಿಗೆ ಜೀವ ತುಂಬಿದರು. ತೆರೆಯ ಹಿಂದೆ ಕಲ್ಲಪ್ಪ ಪೂಜಾರ್, ಅವರು ಪ್ರಸ್ತುತಪಡಿಸಿದ್ದರು. ಮಾಡಿದ್ದ ಕಳ್ಳತನದಿಂದ ತಪ್ಪಿಿಸಿಕೊಳ್ಳಲು ಮಹಿಳೆಯರು ಗರ್ಭಿಣಿಯರಂತೆ ನಟಿಸಿದ್ದು, ಅನ್ಯಾಾಯ ಖಂಡಿಸುವ ಹೋರಾಟಗಾರ ಕೊನೆಗೆ ತಾನು ಕದಿಯುವ ವಿಡಂಬನಾತ್ಮಕ, ಇಬ್ಬರು ಪುರುಷರು ಜಗಳ ನಿಲ್ಲಿಸಿ, ತಮ್ಮ ಹೆಂಡತಿಯರಿಗೆ ಧೈರ್ಯ ತುಂಬಿದ ಹಾಸ್ಯದ ಪರಿ ಪ್ರೇೇಕ್ಷಕರನ್ನು ಅಲುಗಾಡಿಸಲಿಲ್ಲ. ಹಾಗಾಗ ಪ್ರೇೇಕ್ಷಕರ ಜೊತೆ ಸಂವಾದ ನಡೆಸಿದ ಕಲಾವಿದರು ಮೆಚ್ಚುಗೆಗೆ ಪಾತ್ರರಾದರು.ಜಾನಪದ, ರಂಗಗೀತೆ, ಹಿಂದೂಸ್ಥಾಾನಿ ಸಂಗೀತ, ನಾಟಕಗಳ ಹೂರಣದ ಸವಿಯನ್ನು ಎಲ್ಲರು ಸವಿದರು.
ಜನಕವಿ, ದಲಿತ ಸಾಹಿತಿ ಸಿ ದಾನಪ್ಪ ನಿಲೋಗಲ್ ಮಾತನಾಡಿ ರಂಗಭೂಮಿ ಸದಭಿರುಚಿ, ಸಾಮರಸ್ಯ ಮತ್ತು ಮಾನವೀಯ ಮೌಲ್ಯ ಬೆಳೆಸುವ ಸಂಜೀವಿನಿ. ಜನರ ಬದುಕನ್ನು ಹಸನು ಮಾಡುವ ಅದು, ಸಮಾಜದಲ್ಲಿ ಪ್ರೀೀತಿ ಮತ್ತು ಸಾಮರಸ್ಯವನ್ನು ನೆಲೆಗೊಳಿಸುತ್ತದೆ ಎಂದರು. ಪ್ರಸಕ್ತ ಕಾಲಘಟ್ಟವು ವಿಷಮಯವಾಗಿದ್ದು, ಜಾತಿ, ಧರ್ಮದ ಅಸಹನೆ ಹೆಚ್ಚಾಾಗಿದೆ. ಜನರಲ್ಲಿ ಪ್ರೀೀತಿ ಮತ್ತು ವಿಶ್ವಾಾಸವನ್ನು ಮರುನಿರ್ಮಿಸಲು ರಂಗಭೂಮಿ ಅತ್ಯುತ್ತಮ ಮಾರ್ಗವಾಗಿದೆ. ಮಾನವೀಯತೆ ಎಲ್ಲೆಡೆ ನೆಲೆಗೊಳಿಸಬೇಕಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆಯ ನೆಮ್ಮದಿ ಹಾಳಾಗಲಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಡಾ. ಶಿವಶರಣಪ್ಪ ಇತ್ಲಿಿ ಮಾತನಾಡಿ, ನಿರಂತರವು ಸಹಜರಂಗ ತರಬೇತಿ ಶಿಬಿರ, ಕಾವ್ಯ ಓದು, ಸಾಹಿತ್ಯ ಹಾಗೂ ನಾಟಕಗಳ ನೋಡುವುದರ ಮೂಲಕ ಸಾರ್ವಜನಿಕರನ್ನು ಸರಿಯಾದ ದಿಕ್ಕಿಿನತ್ತ ಕರೆದೊಯ್ಯುತ್ತಿಿದೆ ಎಂದರು.
ಈ ವೇಳೆ ಡಾ. ಶಿವ ಶರಣಪ್ಪ ಇತ್ಲಿಿ, ಸಿ ದಾನಪ್ಪ ನಿಲೋಗಲ್, ವಿದ್ಯಾಾವತಿ
ವನಕಿ, ಪಂಪಾಪತಿ ಹೂಗಾರ, ಕಳಕಪ್ಪ ಆದಿಮನಿ, ಈರಮ್ಮ ಹಾಗೂ ಇತರರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ