Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೃಷಿಕ, ಸೈನಿಕ ದೇಶದ ಆಸ್ತಿ- ಮಹಾಂತಸ್ವಾಮೀಜಿ

ಸುದ್ದಿಮೂಲವಾರ್ತೆ
ಮುದಗಲ್ ಏ,೦೬: ದೇಶದ ಜನರಿಗೆ ಅನ್ನ ನೀಡಿ ಪ್ರಾಣ ಉಳಿಸುವ ಕೃಷಿಕ ಮತ್ತು ಗಡಿಯಲ್ಲಿ ದೇಶದ ಭದ್ರತೆಗೆ ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಸೈನಿಕ ನಮ್ಮ ದೇಶದ ಅತೀ ದೊಡ್ಡ ಆಸ್ತಿಯೆಂದು ತಿಮ್ಮಾಪೂರು ಕಲ್ಯಾಣಾಶ್ರಮದ ಪೂಜ್ಯರದ ಮಹಾಂತಸ್ವಾಮೀಜಿ ಸಾಲಿಮಠ ಹೇಳಿದರು.

ಸಮೀಪದ ಕಲ್ಯಾಣಾಶ್ರಮದಲ್ಲಿ ಜನ-ಮನ ಕಲ್ಯಾಣ ಜಾತ್ರೆಯ ರೈತ ಚಿಂತನ, ಕಲ್ಯಾಣ ಶ್ರೀ ಪ್ರಶಸ್ತಿ ಕಾರ್ಯಕ್ರಮದಲ್ಲಿ ಆಶೀರ್ವದಿಸಿ ಮಾತನಾಡಿದ ಅವರು ಕಳೆದ ೮ವರ್ಷದಿಂದ ಆಶ್ರಮವು ಇಂತಹ ಅಪರೂಪದ ಕಾರ್ಯಕ್ರಮ ನೀಡುತ್ತಾ ಬಂದಿದೆ. ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಾನೀಯರನ್ನು ಗುರುತಿಸಿ ಸತ್ಕರಿಸಿ ಗೌರವಿಸುತ್ತದೆ. ಈ ಸಲ ರೈತರನ್ನು ಮತ್ತು ದೇಶದ ಸೈನಿಕರನ್ನು ಮಠದಿಂದ ಗೌರವಿಸುತ್ತಿರುವುದು ಹೆಮ್ಮೆ ಅನಿಸುತ್ತಿದೆ ಎಂದರು.

ಪ್ರಶಸ್ತಿ ಪ್ರದಾನ- ವಿಜಯಪುರದ ಬಸವ ಕೇಂದ್ರದ ಜಿಲ್ಲಾಧ್ಯಕ್ಷ ನಾನಾಗೌಡ ಎಸ್ ಪಾಟೀಲ್ ನಾಗರಹಳ್ಳಿಗೆ ಕೃಷಿ ಕಲ್ಯಾಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಟ್ಟೂರು ಗ್ರಾಮದ ನಿವೃತ್ತ ಯೋಧ ಪಂಪಣ್ಣ ಜಾವೂರುರಿಗೆ ಸಂಸ್ಮರಣೆ ಗೌರವ ಪುರಸ್ಕಾರ. ಮಸ್ಕಿಯಲ್ಲಿ ತಮ್ಮ ಅಮೂಲ್ಯವಾದ ವೈದ್ಯಕೀಯ ಸೇವೆ ಸಲ್ಲಿಸಿದ ಡಾ|| ಶಿವಶರಣಪ್ಪ ಇತ್ಲಿಯವರಿಗೆ ಜೀವಮಾನದ ಸಾಧನೆಗಾಗಿ ಕಲ್ಯಾಣಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಯಿತು.
ಇತ್ತೀಚಿಗೆ ಮಠದ ಪೀಠವನ್ನು ಅಲಂಕರಿಸಿದ ನೂತನ ಶ್ರೀಗಳಾದ ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠ ಬಸವಲಿಂಗ ಸ್ವಾಮೀಜಿ, ನಂದವಾಡಗಿ-ಆಳAದ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ಅಭಿನವ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ, ಅಡವಿ ಅಮರೇಶ್ವರ ತೋಂಟದಾರ್ಯ ಶ್ರೀಗಳಿಗೆ ಮಠದ ಪೂಜ್ಯರಾದ ಮಹಾಂತಸ್ವಾಮೀಜಿ ಸಾಲಿಮಠ ಗೌರವಾರ್ಪಣೆ ಸಲ್ಲಿಸಿದರು.
ಶಿಕ್ಷಕ ಸೂಗುರೇಶ ಹಿರೇಮಠ ಕಾರ್ಯಕ್ರಮದ ನಿರೂಪಣೆ ಮಾಡಿದರು. ಸುತ್ತಲಿನ ಗ್ರಾಮಸ್ಥರು, ಮಠದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ