Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಷಾ ಆಚರಣೆ ದಸರಾ ವಿರೋಧಿಸುಯಲ್ಲ- ಪ್ರೊ.ಮಹೇಶ್‌ಚಂದ್ರ ಗುರು

ಸುದ್ದಿಮೂಲ ವಾರ್ತೆ

ಮೈಸೂರು, ಜು.11 : ಮಹಿಷಾ ದಸರಾ ಆಚರಿಸುವುದು, ನಾಡ ಹಬ್ಬ ದಸರಾ ವಿರೋಧಿಸುವುದಕ್ಕಲ್ಲ. ಮಹಿಷಾ ಮತ್ತು ಚಾಮುಂಡಿ ಭೌಗೋಳಿಕವಾಗಿ ಎಲ್ಲೂ ಒಂದು ಕಡೆ ಹುಟ್ಟಿ ಬೆಳೆದವರಲ್ಲ. ಅಸುರರು ಎಂದರೆ ರಾಕ್ಷಸರಲ್ಲ. ಅವರು ರಕ್ಷಕರು ಎಂದು ವಿಚಾರವಾದಿ ಪ್ರೊ ಮಹೇಶ್ ಚಂದ್ರಗುರು ಪ್ರತಿಪಾದಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಷಾ ನಮ್ಮ ಚಾರಿತ್ರಿಕ ಪುರುಷ ಈ ನೆಲದ ಮಹಾ ಪುರುಷನ ಆಚರಣೆ ಮಾಡೋದು ನಮ್ಮ ಧಾರ್ಮಿಕ ಕರ್ತವ್ಯ . ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದೆ. ಕಳೆದ 5 ವರ್ಷ ನಮಗೆ ಆಚರಣೆ ಮಾಡಲು ಅವಕಾಶ ಮಾಡಿಕೊಡಲಿಲ್ಲ ಎಂದು ಹೇಳಿದರು.

ಮಹಿಷಾ ದಸರಾವನ್ನುನಿರಂತರವಾಗಿ ಮಾಡಿಕೊಂಡು ಬಂದಿದ್ದೇವೆ. ಇತಿಹಾಸ ಮತ್ತು ಪರಂಪರೆಯನ್ನ ಮರೆಯಬಾರದು. ಚಾಮುಂಡಿ ತಾಯಿ ಪುರಾಣ ಪ್ರಸಿದ್ದರಾದವರು .ಆದರೆ ಮಹಿಷಾ ಇತಿಹಾಸ ಪುರುಷ. ಪುರಾಣ ಕಟ್ಟಕತೆಗಳು, ಇತಿಹಾಸ ಸತ್ಯದ ಕತೆ ಎಂದರು.

ಸುಳ್ಳು ಮತ್ತು ಸತ್ಯದ ನಡುವೆ ನಡೆಯುವ ಸಂಘರ್ಷ ಇದು. ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸದೇ ಮತ್ಯಾರು ತಿಳಿಸಬೇಕು. ಯಾರ ದಸರಾವನ್ನಾದರೂ ಮಾಡಿಕೊಳ್ಳಲಿ. ಅಡ್ಡಿ ಇಲ್ಲ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಸರಾ ಆರಂಭವಾಯಿತು. ನಾಲ್ವಡಿ ಅವರ ಕಾಲದಲ್ಲಿ ಇನ್ನೂ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಚಾಮುಂಡಿ ಮತ್ತು ಮಹಿಷಾ ಒಂದು ಕಾಲಘಟ್ಟದವರಲ್ಲ ಎಂದು ಹೇಳಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ