Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿರವಾರ : ತಾಲ್ಲೂಕು ಅಭಿವೃದ್ಧಿಗೆ ಪಣತೊಟ್ಟು ನಿಂತ ಸಚಿವ ಭೋಸರಾಜು, ಶಾಸಕ ಹಂಪಯ್ಯ ನಾಯಕ ಮೂರು ದಶಕದ ಕ್ರೀಡಾಂಗಣ ಕನಸು ನನಸಾಗುವ ಕಾಲ ಸನ್ನಿಹಿತ..!

 



 ಸುರೇಶ ಹೀರಾ ಸಿರವಾರ, ಡಿ.28:
ಈ ಭಾಗದ ಕ್ರೀೆಡಾ ಪಟುಗಳು, ಕ್ರೀೆಡಾ ಅಭಿಮಾನಿಗಳು ಕಳೆದ 30ವರ್ಷದಿಂದ ಸಿರವಾರ ಪಟ್ಟಣದಲ್ಲಿ ಕ್ರೀೆಡಾಂಗಣ ನಿರ್ಮಾಣಕ್ಕೆೆ ಮನವಿ ಪತ್ರಗಳು, ಹೋರಾಟ,ಶಾಸಕರ, ಸಚಿವರ ಭೇಟಿ ಮಾಡಿದ ಲ ಇಂದು ನೂತನ ಕ್ರೀೆಡಾಂಗಣದ ಕನಸು ನನಸಾಗುವ ಕಾಲ ಬಂದಿದೆ.
ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮುಖ್ಯ ರಸ್ತೆೆಯಲ್ಲಿ ಸರ್ವೆ ನಂ.403ರಲ್ಲಿ 8ಎಕರೆಯ ಭೂಮಿಯಲ್ಲಿ ಬೃಹತ್ ಕ್ರೀೆಡಾಂಗಣ ನಿರ್ಮಾಣವಾಗಲಿದೆ.
ಕ್ರೀಡಾಂಗಣ ನಿವೇಶನಕ್ಕೆೆ ಇದ್ದ ಅಡೆ ತಡೆಗಳು ಸರಕಾರದ ಮಟ್ಟದಲ್ಲಿ ಶಾಸಕರು, ಸಚಿವರ ಶ್ರಮದಿಂದ ಪರಿಹಾರವಾಗಿವೆ, ಸರಕಾರದಿಂದ ಕ್ರೀಡಾ ಇಲಾಖೆಯ ವತಿಯಿಂದ 4ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.
ಡಿಸೆಂಬರ್ 29ರಂದು ಸೋಮವಾರ ವಿಜ್ಞಾನ ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವರು, ಶಾಸಕ ಹಂಪಯ್ಯ ನಾಯಕ ಭೂಮಿ ಪೂಜೆ ಮಾಡುವ ಮೂಲಕ ನೂರಾರು ಕ್ರೀಡಾ ಪಟುಗಳಲ್ಲಿ ಚೈತನ್ಯ ತುಂಬಿದ್ದಾರೆ.
ಸಿರವಾರ ಹೋಬಳಿ ಕೇಂದ್ರ ಮೇಲ್ದರ್ಜೆಗೆ ಏರಿಸುವ ಮೂಲಕ ತಾಲ್ಲೂಕು ಕೇಂದ್ರ ಎಂದು ಘೋಷಣೆ ಮಾಡಿ, 7ವರ್ಷದಲ್ಲಿ ಅಭಿವೃದ್ಧಿಿ ಪಥದತ್ತ ಸಾಗಿದ್ದು, ಪ್ರಜಾಸೌಧ ನಿರ್ಮಾಣ ಕಾರ್ಯಕ್ರಮವನ್ನು 5ಎಕರೆ ಪ್ರದೇಶದಲ್ಲಿ 8ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಕ್ಕೆೆ ಮುಂದಾಗಿದ್ದು ಕರ್ನಾಟಕ ಗೃಹ ಮಂಡಳಿಯವರಿಗೆ ಕಾಮಗಾರಿ ಜವಾಬ್ದಾಾರಿ ನೀಡಲಾಗಿದೆ, ಇನ್ನೂ ಗ್ರಂಥಾಲಯ, ವಸತಿ ನಿಲಯ, ವಾಲ್ಮೀಕಿ ಭವನ, ಅಗ್ನಿಿಶಾಮಕ ಠಾಣೆ, ರಸ್ತೆೆ ವಿಭಜಕ, ಹೈಮ್ಟ್‌ಾ ದೀಪಗಳು, ಬಸ್ ನಿಲ್ದಾಾಣ, ಇಂದಿರಾ ಕ್ಯಾಾಂಟಿನ್ ಜನರಿಗೆ ಅನುಕೂಲ ಸೇರಿದಂತೆ ಹಲವಾರು ಅಭಿವೃದ್ಧಿಿ ಕಾರ್ಯಗಳಿಗೆ ಸಚಿವ ಎನ.ಎಸ್.ಭೋಸರಾಜು ಮಾನ್ವಿಿ ಶಾಸಕ ಹಂಪಯ್ಯ ನಾಯಕ ಪಣ ತೊಟ್ಟು ನಿಂತಂತೆ ಕಾಣುತ್ತಿಿದೆ.
ತಾಲ್ಲೂಕಿನಲ್ಲಿ ಸರ್ಕಾರಿ ಕಚೇರಿಗಳು ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸಿದರು. ತಾಲ್ಲೂಕು ಕೇಂದ್ರ ಹೆಸರಿಗೆ ಮಾತ್ರ ಎಂದು ಅನೇಕರು ಶಾಪ ಹಾಕಿದ್ದೂ ಉಂಟು. ಕಳೆದ 2 ವರ್ಷಗಳಲ್ಲಿ ತಾಲೂಕಿನ ಅಭಿವೃದ್ಧಿಿಗೆ ವೇಗ ಸಿಕ್ಕಿಿದೆ. ಬೇರೆ ತಾಲ್ಲೂಕು ಕೇಂದ್ರಗಳಲ್ಲಿ ಮಿನಿ ವಿಧಾನ ಸೌಧ (ಪ್ರಜಾಶಕ್ತಿಿ ಸೌಧ) ನಿರ್ಮಾಣಕ್ಕೆೆ ತೊಂದರೆ ಕಾಣಬಹುದು, ಸಿರವಾರ ತಾಲೂಕು ಕೇಂದ್ರ ಅಭಿವೃದ್ಧಿಿ ವೇಗವಾಗಿ ಅಭಿವೃದ್ಧಿಿ ಕಾರ್ಯ ದತ್ತ ಸಾಗಿದ್ದು ಯುವ ಪೀಳಿಗೆಗೆ ಸಂತಸವಾಗಿದೆ. ಇನ್ನೂ ರಾಜಕೀಯವಾಗಿ ಟೀಕೆ ಟಿಪ್ಪಣಿ, ಆರೋಪ, ಮಾಡುವುದು ಸಹಜವಾದರೂ, ಸಿರವಾರ ತಾಲೂಕು ವಿಧಾನಸಭಾ ಕ್ಷೇತ್ರವಾಗಬೇಕು ಎಂಬ ಮಾತುಗಳು, ಸಹಕೇಳಿ ಬರುತ್ತಿಿವೆ. ಹಾಗಾದಲ್ಲಿ ಅಭಿವೃದ್ಧಿಿಗೆ ಪೂರಕವಾಗಿ, ಪ್ರತ್ಯೇಕ ಅನುದಾನ ಸಿಗುತ್ತದೆ, ಸ್ಥಳೀಯರು ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂಬುದು ಜನರ ನಿಲುವಾಗಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ