Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ರಿಕೆಗಳು ಅಭಿವೃದ್ಧಿಪರವಾಗಿರಬೇಕು-ಶಾಸಕ ರಾಘವೇಂದ್ರ ಹಿಟ್ನಾಳ

ಪತ್ರಿಕೆಗಳು ಅಭಿವೃದ್ಧಿಪರವಾಗಿರಬೇಕು-ಶಾಸಕ ರಾಘವೇಂದ್ರ ಹಿಟ್ನಾಳ

ಸುದ್ದಿಮೂಲವಾರ್ತೆ

ಕೊಪ್ಪಳ. ಆ.೬: ಸಮಾಜದ ಸ್ವಾಸ್ಥ್ಯ ಕಾಪಾಡುವುದು, ಜನರ ನಡುವೆ ಸಾಮರಸ್ಯ ಮೂಡಿಸುವುದರ ಜೊತೆಗೆ ಪತ್ರಿಕೆಗಳು ಸದಾ ಅಭಿವೃದ್ಧಿಪರವಾಗಿರಬೇಕೆಂದು ಶಾಸಕ ರಾಘವೇಂದ್ರ ಹಿಟ್ನಾಳ ಅಭಿಪ್ರಾಯಪಟ್ಟರು.

ಅವರು ಭಾನುವಾರ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದ ಬಳಿ ಇರುವ ಕೊಪ್ಪಳ ಸಂಜೆ ನೂತನ ಸಂಜೆ ದಿನಪತ್ರಿಕೆಯ ಬಿಡುಗಡೆ ಹಾಗೂ ಪತ್ರಿಕಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನೂತನ ಪತ್ರಿಕೆಗೆ ಶುಭ ಹಾರೈಸಿದ ಅವರು, ಪತ್ರಿಕೆಗಳು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸರಕಾರ ಹಾಗೂ ನಾಗರಿಕರ ನಡುವೆ ಸಂಪರ್ಕದ ಕೊಂಡಿಯಾಗಿಯೂ ಪತ್ರಿಕೆಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದ ಅವರು, ಪತ್ರಿಕೆಗಳು ಸದಾ ಅಭಿವೃದ್ಧಿಪರವಾಗಿ ಕೆಲಸ ಮಾಡಬೇಕೆಂದರು. ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಿಕೆಗಳ, ಪತ್ರಕರ್ತರ ಪಾತ್ರ ಬಹು ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸ್ಥಳೀಯ ಜ್ಞಾನಬಂಧು ಸ್ಕೂಲ್‌ನ ಅಧ್ಯಕ್ಷ ಹಾಗೂ ಮೋಚಿ ಸಮಾಜದ ಮುಖಂಡ ದಾನಪ್ಪ ಜಿ.ಕವಲೂರು, ಬಿಸರಹಳ್ಳಿ ಗ್ರಾ.ಪಂ.ಅಧ್ಯಕ್ಷ ರವೀಂದ್ರಗೌಡ ಮಾಲಿಪಾಟೀಲ್, ಹಿರೇಸಿಂದೋಗಿ ಪ್ರಗತಿ ಗ್ರಾಮೀಣ ಬ್ಯಾಂಕನ ಹಿರಿಯ ವ್ಯವಸ್ಥಾಪಕ ವಿಜಯಕುಮಾರ ಜಂಗಮಶೆಟ್ಟಿ, ಜಗದೀಶ ತೆಗ್ಗಿನಮನಿ, ಮುಸ್ತಾಫ್ ಅತ್ತಾರ, ಅಮರ ಕಲಾಲ, ಶಿವು ಕೋಣಂಗಿ, ಈರಣ್ಣ ಬುಲ್ಟಿ, ಮಂಜುನಾಥ ತರಕಾರಿ, ಮುತ್ತುಸ್ವಾಮಿ, ಈರಣ್ಣ ತೆಗ್ಗಿನಮನಿ, ರೇಣುಕಪ್ಪ ಕುಟುಗನಹಳ್ಳಿ, ಪತ್ರಕರ್ತರಾದ ಎಂ.ಸಾದಿಕ್ ಅಲಿ, ಜಿ.ಎಸ್.ಗೋನಾಳ, ಹರೀಶ್ ಎಚ್.ಎಸ್, ವೈ.ಬಿ.ಜೂಡಿ, ವೀರಣ್ಣ ಕಳ್ಳಿಮನಿ, ಹನುಮಂತ ಹಳ್ಳಿಕೇರಿ, ರವಿಚಂದ್ರ ಬಡಿಗೇರ, ಪಕೀರಪ್ಪ ಗೋಟೂರ, ಪ್ರಭು ಚೆನ್ನದಾಸರ, ಲಲಿತಾ ಪ್ರಜಾರ, ಉದಯ ತೋಟದ, ಕೊಪ್ಪಳ ಸಂಜೆ ಸಂಪಾದಕ ಆನಂದ ಜಾಲಿಹಾಳ, ಸಹ ಸಂಪಾದಕ ರಮೇಶ ಪವಾರ್ ಮತ್ತಿತರರು ಉಪಸ್ಥಿತರಿದ್ದರು.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ