Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೋಲರ್‌ ಸ್ಕೇಟಿಂಗ್‌ಗೆ ಆಯ್ಕೆ

ಸುದ್ದಿಮೂಲ ವಾರ್ತೆ

ಬೆಂಗಳೂರು ನ. 08 : ಮನುಷ್ಯನ ದಿನ ನಿತ್ಯದ ಚಟುವಟಿಕೆಯಲ್ಲಿ ಆರ್ಟಿಸ್ಟಿಕ್ ರೋಲರ್ ಸ್ಕೇಟಿಂಗ್ ಕೂಡ ಒಂದಾಗಬೇಕು ಎಂದು ರಾಷ್ಟ್ರೀಯ ಸ್ಪೀಡ್ ಚಾಂಪಿಯನ್ ಎ.ಆಂಟನಿ ಜೇಮ್ಸ್ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಆರ್ಟಿಸ್ಟಿಕ್ ರೋಲರ್ ಸ್ಕೇಟಿಂಗ್‌ನ 39 ನೇ ಕರ್ನಾಟಕ ರಾಜ್ಯ ಆಯ್ಕೆ ಟ್ರೇಲ್ಸ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಇದು ಇಟಲಿಯಲ್ಲಿ ಹುಟ್ಟಿಕೊಂಡ ಸ್ಪರ್ಧಾತ್ಮಕ ಕ್ರೀಡೆಯಾಗಿದ್ದು, ಫಿಗರ್ ಸ್ಕೇಟಿಂಗ್ ಅನ್ನು ಹೋಲುತ್ತದೆ ಆದರೆ ಸ್ಪರ್ಧಿಗಳು ಐಸ್ ಸ್ಕೇಟ್‌ಗಳ ಬದಲಿಗೆ ರೋಲರ್ ಸ್ಕೇಟ್‌ಗಳನ್ನು ಧರಿಸುತ್ತಾರೆ. ಭಾರತದಲ್ಲಿನ ಈ ಕ್ರೀಡೆಯನ್ನು ವಿಶೇಷವಾಗಿ ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ ನಿರ್ವಹಿಸುತ್ತದೆ.

ಕಲಾತ್ಮಕ ರೋಲರ್ ಸ್ಕೇಟಿಂಗ್‌ನಲ್ಲಿ ಹಲವಾರು ವಿಭಾಗಗಳಿವೆ: ಫ್ರೀಸ್ಟೈಲ್, ಫಿಗರ್, (ಹುಡುಗ ಮತ್ತು ಹುಡುಗಿ) ಜೋಡಿ ಸ್ಕೇಟಿಂಗ್, ನಿಖರತೆ (ಗ್ರೂಪ್ ಸ್ಕೇಟರ್‌ಗಳು), ಏಕವ್ಯಕ್ತಿ ನೃತ್ಯ, ಕ್ವಾರ್ಟೆಟ್ (4 ಆಟಗಾರರು), ಶೋ ಗ್ರೂಪ್ ಗಳಾಗಿವೆ ಎಂದು ತಿಳಿಸಿದರು.

ರಾಷ್ಟ್ರಿಯ ಸ್ಕೆಟರ್ ರವೀಶ್ ರಾವ್ ಮಾತನಾಡಿ, ಬೆಂಗಳೂರಿನಲ್ಲಿ ಅಕ್ಟೋಬರ್ 2021 ರಲ್ಲಿ ನಡೆದ ಪ್ಲೇ ಮೇನಿಯಾದಿಂದ ನಡೆಸಲ್ಪಡುವ ಕೆ ಆರ್ ಎಸ್ ಎ ಯ ಮಾರ್ಕ್ ಸ್ಕೇಟಿಂಗ್ ಕ್ಲಬ್‌ನಿಂದ ಇದನ್ನು ಪ್ರಾರಂಭಿಸಲಾಗಿದೆ. ಅದೇ ರೀತಿಯಾಗಿ ಕರ್ನಾಟಕದಲ್ಲಿ ಕೆ ಆರ್ ಎಸ್ ಎ ಸಂಸ್ಥೆಯು ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಕೆಆರ್ ಎಸ್ ಎ ನ ಪ್ರಧಾನ ಕಾರ್ಯದರ್ಶಿ ಇಂದೂಧರ್ ಸೀತಾರಾಮ್ ಮಾತನಾಡಿ, ಕರ್ನಾಟಕ ದಲ್ಲಿ ಇಲ್ಲಿಯವರೆಗೆ 2022 ರಲ್ಲಿ 4 ರಾಷ್ಟ್ರೀಯ ಕಂಚಿನ ಪದಕಗಳು ಮತ್ತು ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಹಲವಾರು ಚಿನ್ನದ ಬೆಳ್ಳಿ ಕಂಚಿನ ಪದಕಗಳನ್ನು ಒಳಗೊಂಡಂತೆ ಹಲವಾರು ಪದಕಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಆಯ್ಕೆಯಾದವರ ಪಟ್ಟಿ

ರಾಷ್ಟ್ರೀಯ ಮಟ್ಟದ ಆರ್ಟಿಸ್ಟಿಕ್ ರೋಲರ್ ಸ್ಕೇಟಿಂಗ್‌ಗೆ ಆಯ್ಕೆಯಾದ ಕರ್ನಾಟಕ ರಾಜ್ಯ ಆರ್ಟಿಸ್ಟಿಕ್ ರೋಲರ್ ಸ್ಕೇಟಿಂಗ್ ಪದಕ ವಿಜೇತರ ರಾಗಿ ಶ್ರೀವ್ಯಾ ಆರ್, ಅದ್ವಿಕ್ ದಾಶ್, ಶ್ಲೋಕ್ ಕುನಾಲ್ ಘೋಟ್ಗೆ, ಶಶಾಂಕ್ ವೆಂಕಟ,ಬೋಡಪಾಟಿ, ನಿತಿಕಾ ಎ ಎಲ್, ಜಗನ್ಮಯ್ ಎಡತ್ತಿಲ್, ಕಾಶಿಶ್ ಎಸ್ ಚೋರ್ಡಿಯಾ, ಮಾನ್ವಿ ಎಂ ರೆಡ್ಡಿ ಕೆ, ಆದಿತ್ಯ. ವಿ, ದಿಯಾನ್ ಬಫ್ನಾ, ಬಂದ ಮೇಧಾ ವೆಂಕಟ, ಕಾರ್ತಿಕ್, ಗೌರವ್. ಎಂ, ಧ್ವನಿ ಜೈನ್, ಹಿರಾಲ್ ಮುಖೇಶ್ ಜೈನ್, ಸಾಯಿ ಸಹಸ್ರ ವಂಕದಾರಿ, ಕೆ.ಎಸ್ ಶಶಾಂಗ್ ಪ್ರಣವ್, ಬಿಹಾನ್ ಗುಪ್ತಾ, ವೇದಾರ್ಥ್ ಯುವರಾಜ್,ವಿಹಾನ್ ಎಂ ಕುಮಾರ್, ಸಮಯ ಶೆಟ್ಟಿ, ನಕ್ಷತ್ರ, ಸೈಯದ್ ಅಬ್ದುಲ್ ಆಯ್ಕೆ ಆಗಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ