ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಡಿ.24:
ಗ್ರಾಾಮ ಪಂಚಾಯತಿ ನೌಕರರಿಗೆ 15 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ಗ್ರಾಾಮ ಪಂಚಾಯತಿ ನೌಕರರ ಸಂಘಟನೆ ಯಿಂದ ಪಂಚಾಯತಿ ಮುಂದೆ ಪ್ರತಿಭಟನೆ ಮಾಡಲಾಯಿತು,
ಪ್ರತಿಭಟನೆಗೆ ಸ್ಪಂದಿಸಿ ಪಂಚಾಯತಿ ಆಡಳಿತ ಮಂಡಳಿ 15 ತಿಂಗಳ ಬಾಕಿ ವೇತನ ಸಂಬಳವನ್ನು ತೆರಿಗೆ ವಸೂಲಿಯಲ್ಲಿ 2 ತಿಂಗಳ ಕೊಡುತ್ತೇವೆ ,ಉಳಿದ 13 ತಿಂಗಳ ಬಾಕಿ ವೇತನ ಹಂತಹಂತವಾಗಿ ಕೊಡುತ್ತೇವೆ ಎಂದು ಲಿಖಿತ ಭರವಸೆ ಕೊಟ್ಟರು,
ಪ್ರತಿಭಟನೆ ನೇತೃತ್ವ ವನ್ನು ನೌಕರರ ಸಂಘದ ಅಧ್ಯಕ್ಷ ವೆಂಕೋಬ ಗಾಜಲದಿನ್ನಿಿ, ಕಾರ್ಯದರ್ಶಿ ಕಾಶಿಲಿಂಗ ಕದ್ನೆೆಳ್ಳಿಿ, ಮುದುರಂಗಪ್ಪ, ಗೌಡ, ಸೋಹೆಲ್, ಚನ್ನಮ್ಮ, ನಾಗರತ್ನ, ಮಹಾದೇವಮ್ಮ ಹಾಗೂ ಸಿಐಟಿಯು ಮುಖಂಡರಾದ ಗಿರಿಯಪ್ಪ ಪೂಜಾರಿ ವಹಿಸಿದ್ದರು.
ಪಂಚಾಯತಿ ಅಭಿವೃದ್ಧಿಿ ಅಧಿಕಾರಿ ನರಸಪ್ಪ ,ಲೆಕ್ಕಾಾಧಿಕಾರಿ ಅಯ್ಯಪ್ಪ, ಪಂಚಾಯತಿ ಸದಸ್ಯರಾದ ತಿಮ್ಮಣ್ಣ ನಾಯಕ ದಿವಾನ,ಮಕ್ತಮ್,ಅಧ್ಯಕ್ಷರಾದ ವಿಜಯಲಕ್ಷ್ಮಿಿ ವೆಂಕೋಬ ತೋಟದ್, ನಾಸಿರ್ ಹುಸೇನ್, ರಂಗನಾಥ ಕುದರಿ ಸೇರಿದಂತೆ ಅನೇಕರು ಇದ್ದರು.