ಸುದ್ದಿಮೂಲ ವಾರ್ತೆ ಕವಿತಾಳ, ಡಿ.14
ಮಕ್ಕಳಲ್ಲಿರುವ ಪ್ರತಿಭೆ ಹೊರ ತರುವುದೇ ಪ್ರತಿಭಾ ಕಾರಂಜಿ ಇದು ಸರಕಾರಿ ಕಾರ್ಯಕ್ರಮವಾಗಿದ್ದು ಎಲ್ಲಾ ಮಕ್ಕಳು ಭಾಗವಹಿಸಬೇಕು ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು
ಸಮೀಪದ ಹಾಲಾಪುರು ಗ್ರಾಾಮದ ಸಮೂಹ ಸಂಪನ್ಮೂಲ ಕೇಂದ್ರ ಹಾಲಾಪುರು ಮತ್ತು ವಿದ್ಯಾಾದಾಯಿನಿ ಹಿರಿಯ ಪ್ರಾಾಥಮಿಕ ಶಾಲೆ ಇವರ ಸಂಯುಕ್ತಾಾಶ್ರಯದಲ್ಲಿ ಶನಿವಾರ ಹಮ್ಮಿಿಕೊಂಡಿದ್ದ 2025-26 ನೆ ಸಾಲಿನ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಭಕ್ತಿಿಗೀತೆ, ಜಾನಪದ ನೃತ್ಯ, ರಸ ಪ್ರಶ್ನೆೆ, ಜನಪದ ಗೀತೆ, ರಂಗೋಲಿ, ಛದ್ಮವೇಷ, ಚಿತ್ರ ಕಲೆ,ಕತೆ ಹೇಳುವುದು, ಭರತ ನಾಟ್ಯ, ಮಿಮಿಕ್ರಿಿ, ಪ್ರಬಂಧ ರಚನೆ, ಭಾವಗೀತೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಿದರು.
ಚಂದ್ರಮೌಳೇಶ್ವರ ತಾತ, ದಂಡಗುಂಡಪ್ಪ ತಾತ ಜಂಗಮರಹಳ್ಳಿಿ ಸಾನಿಧ್ಯ ವಹಿಸಿದ್ದರು.
ಶಾಲೆಯ ಅಧ್ಯಕ್ಷ ವೆಂಕಟರೆಡ್ಡಿಿಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಒಟ್ಟು 17 ಶಾಲೆಯ 1 ರಿಂದ 12 ತರಗತಿಯವರಿಗೆ ಮಕ್ಕಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪಂಪಾಪತಿ ಹೂಗಾರ, ಮಸ್ಕಿಿ ತಾಲೂಕು ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿಿ, ಬಲವಂತರಾಯ ಗೌಡ, ಕರಿಯಪ್ಪ ಹಾಲಾಪುರು, ಜಗದೀಶ ಚಂದ್ರ ಸ್ವಾಾಮಿ, ಕರಿಯಪ್ಪ ಬೆಂಗಳೂರು, ತಾಲೂಕು ಗ್ಯಾಾರಂಟಿ ಅಧ್ಯಕ್ಷ ಮೈಬುಬ್ ಸಾಬ್, ಮಂಜುನಾಥ ಪಾಟೀಲ್, ಪ್ರಶಾಂತಕುಮಾರ ಪಾಟೀಲ್, ಚನ್ನವೀರ ಜೋತನ್, ಅರವಿಂದ ಪಾಟೀಲ್ ಭಾಗವಹಿಸಿದ್ದರು.