Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮದ್ಯದ ಅಂಗಡಿ ಬೇಕೆಂದು ಪ್ರತಿಭಟನೆ

ಸುದ್ದಿಮೂಲವಾರ್ತೆ

ಕೊಪ್ಪಳ, ಸೆ.19: ಸಾಮಾನ್ಯವಾಗಿ ಊಟ, ಮನೆ ಬೇಕೆಂದು ಹೋರಾಟ ಮಾಡುವುದು ಕೇಳಿದ್ದೇವೆ. ಇನ್ನೊಂದು ಕಡೆ ನಮ್ಮೂರಿನಲ್ಲಿ ಸರಾಯಿ ಅಂಗಡಿ ಬೇಡ ಎಂದು ಹೋರಾಟ ಮಾಡಿದ್ದು ಕೇಳಿದ್ದೇವೆ. ಆದರೆ ಇಂದು ಕೊಪ್ಪಳದಲ್ಲಿ ಇಂದು ಇದಕ್ಕೆ ವಿರೋಧವಾಗಿರುವ ಹೋರಾಟ ನಡೆಯಿತು. ನಮ್ಮೂರಿಗೆ ಬಾರ್ ಒಪನ್ ಮಾಡಿ ಎಂದು ಕೆಲವರು ಹೋರಾಟ ಮಾಡಿದ ಘಟನೆ ನಡೆದಿದೆ.

ಇಂದು ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಕೆಲವರು ಬೇಕೆ ..ಬೇಕು ಬಾರ್ ಬೇಕು. ಅನ್ಯಾಯ ದಿಕ್ಕಾರ. ಬಾರ್ ಒಪನ್ ಮಾಡಲು ವಿರೋಧಿಸುವವರಿಗೆ ದಿಕ್ಕಾರ ಎಂದು ಘೋಷಣೆ ಹಾಕುತ್ತಾ ನಮ್ಮ ಗ್ರಾಮದಲ್ಲಿ ಎಣ್ಣೆ ಅಂಗಡಿ ಬೇಕೆಂದು ಹೋರಾಟ ಮಾಡಿದ್ದಾರೆ.

ಇಂದು ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಕುಕನೂರ ತಾಲೂಕಿನ ಕುದರಿಮೋತಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು. ಕುದರಿಮೋತಿಗೆ ಕಾರಟಗಿಯಲ್ಲಿದ್ದ ಲಿಕ್ಕರ್ ಅಂಗಡಿ ಸ್ಥಳಾಂತರಿಸಿ ಆರಂಭಿಸಲು ಸರಕಾರ ಪರವಾನಿಗೆ ನೀಡಿದೆ. ಆದರೆ ಇಲ್ಲಿ ಮದ್ಯದ ಅಂಗಡಿ ಬೇಡ ಎಂದು ಕೆಲವರು ವಿರೋಧಿಸಿ ನ್ಯಾಯಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾಯಲಯವು ಇಲ್ಲಿ ಲಿಕ್ಕರ್ ಅಂಗಡಿ ಆರಂಭಿಸಬಹುದು ಎಂದು ಸೂಚನೆ ನೀಡಿದೆ. ಆದರೆ ಪರವಾನಿಗೆ ಪಡೆದಿದ್ದರೂ ಆರಂಭ ಮಾಡುತ್ತಿಲ್ಲ ಎಂದು ಮದ್ಯ ಪ್ರಿಯರು ಹೋರಾಟ ಮಾಡಿದ್ದಾರೆ.

ಗ್ರಾಮದಲ್ಲಿ ಅಧಿಕೃತ ವಾಗಿ 30-40 ಕಡೆ ಮದ್ಯ ಮಾರಾಟ ಮಾಡಲಾಗುತ್ತಿದೆ. ನ್ಯಾಯಲಯ ಇಲ್ಲಿ ಬಾರ್ ಒಪನ್ ಮಾಡಲು ಆದೇಶಿಸಿದೆ. ಆದರೆ ಕೆಲವರ ವಿರೋಧದಿಂದಾಗಿ ಲಿಕ್ಕರ್ ಶಾಪ್ ಆರಂಭವಾಗುತ್ತಿಲ್ಲ. ಕುಡುಕರ ಬೇರೆ ಊರಿಗೆ ಹೋಗಿ ಬರಬೇಕಾಗಿದೆ. ಅನಧಿಕೃತ ಅಂಗಡಿಗಳಲ್ಲಿ ಅಧಿಕ ದರದಲ್ಲಿ ಮಾರಾಟವಾಗುತ್ತಿದೆ. ನಮಗೆ ಬಾರ್ ಅಂಗಡಿ ಬೇಕೆಂದು ಗ್ರಾಮಸ್ಥರು ಆಗ್ರಹಿಸಿ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ. ಈ ಕುರಿತು ಪರಿಶೀಲಿಸುವುದಾಗಿ ಹೇಳಿಕೆ ನೀಡಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ