Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉನ್ನತ ಶಿಕ್ಷಣ ಸಚಿವರ ಪದಬಳಕೆ ಖಂಡನೀಯ- ಆರ್ ರುದ್ರಯ್ಯ

ಸುದ್ದಿಮೂಲ ವಾರ್ತೆ ಮುದಗಲ್ , ಫೆ.19:
ಇತ್ತೀಚಿಗೆ ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ ನಾರಾಯಣ ಬಳಸಿರುವ ಟಿಪ್ಪುವಿನಂತೆ ಮಾಜಿ ಸಿಎಂ ಸಿದ್ಧರಾಮಯ್ಯರನ್ನ ಹೊಡೆದುಹಾಕಿ ಪದವನ್ನು ಖಂಡಿಸಿ ಇದೇ ಫೆ,20ರಂದು ಲಿಂಗಸುಗೂರುನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆರ್ ರುದ್ರಯ್ಯ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ ನಾರಾಯಣರವರು ಸಿದ್ಧರಾಮಯ್ಯ ನವರ ಬಗ್ಗೆ ಅನಾಗರೀಕ ಪದ ಬಳಕೆ ಮಾಡಿದ್ದಾರೆ. ಟಿಪ್ಪುವಿನಂತೆ ಸಿದ್ದರಾಮಯ್ಯ ರನ್ನ ಹೊಡೆದುಹಾಕಿ ಎಂದು ಅವಹೇಳನಕಾರಿ ಹೇಳಿಕೆ ಖಂಡನೀಯ. ಟಿಪ್ಪು ಒಬ್ಬ ಹೋರಾಟಗಾರವೆಂಬುದು ಪಠ್ಯದಲ್ಲಿ ಓದಿ ತಿಳಿದುಕೊಂಡಿದ್ದೇವೆ. ಬ್ರಿಟಿಷರ ಜತೆಗೆ ನಾಲ್ಕು ಆಂಗ್ಲೋ-ಇಂಡಿಯಾ ಟಿಪ್ಪುವಿನ ಯುದ್ಧ ಆಗಿವೆ. ಧರ್ಮದ ಆಧಾರದ ಮೇಲೆ ಯುವಕರನ್ನ ಬಿಜೆಪಿಯವರು ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯ-ದೇಶವನ್ನು ಬಿಜೆಪಿಯವರು ಎತ್ತಕೊಂಡ್ಯೂತ್ತಿದ್ದಾರೆಂಬುದು ತಿಳಿಯದಾಗಿದೆ. ಸಮಾಜದಲ್ಲಿ ಆಶಾಂತಿ ಸೃಷ್ಠಿ ಮಾಡುತ್ತಿದ್ದಾರೆ. ಸರಕಾರ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಲಿಂಗಸುಗೂರುನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು. ನಾಗನಗೌಡ ತುರಡಗಿ, ಎಸ್ ಆರ್ ರಸೂಲ್, ಬಸನಗೌಡ ಕರಡಕಲ್, ಅಮರಯ್ಯ ಹಿರೇಮಠ, ಮಾಧವ್ ನೇಲಗಿ, ಪಿಡ್ಡಪ್ಪ ನಾಯಕ, ಶರಣಪ್ಪ ಚಿಕ್ಕಹೆಸರೂರು, ಪ್ರಭು ಹವಾಲ್ದಾರ್, ಸಂಗಣ್ಣ ಬಯ್ಯಾಪೂರು, ನಾಗರಾಜ ದಫೇದಾರ್, ಶ್ರೀ ಶೈಲ್ ಅಂಗಡಿ, ಅಂಬರೀಶ್ ಪೂಜಾರಿ, ರಹಿಮಾನ ಟೇಲರ್, ಶಾಂತಾ ಹಣಿಗಿ, ಅಬ್ದುಲ್ ಖದೀರ್, ರಹೀಂ ಶಾ, ಹುಸೇನ್ ಭಾಷ ಡೊಂಗ್ರಿ ಹಾಗೂ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ