Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಕ್ಷರ ಆರಾಧನೆಯಲ್ಲಿ ಕೃತಿಗಳ ಬಿಡುಗಡೆ

ಸುದ್ದಿಮೂಲ ವಾರ್ತೆ

ಬೆಂಗಳೂರು, ಅ. 08 : ಅಕ್ಷರ ಮಹಾಕ್ರಾಂತಿಗೆ ತಂತ್ರಜ್ಞಾನ ಕೂಡ ಸಹಕಾರ ನೀಡಿದೆ ಎಂದು ನಟ ರಮೇಶ್‌ ಅರವಿಂದ್‌ ಅಭಿಪ್ರಾಯಪಟ್ಟರು.

ಸಾವಣ್ಣ ಪ್ರಕಾಶನ ದಿಂದ ‘ಸಾವಣ್ಣ ಅಕ್ಷರ ಆರಾಧನೆ’ ಪುಸ್ತಕ ಲೋಕಾರ್ಪಣೆ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯಿತು.

ನಟ ರಮೇಶ್ ಅರವಿಂದ್ ಅವರು ಗಂಗಾವತಿ ಪ್ರಾಣೇಶ್ ಅವರ ‘ನುಡಿಪಡಿ’, ವಿರೂಪಾಕ್ಷ ದೇವರಮನೆ ಅವರ ‘ಕಣ್ಣಿಗೆ ಕಾಣುವ ದೇವರು’ ರಂಗಸ್ವಾಮಿ ಮೂಕನಹಳ್ಳಿ ಅವರ ‘ಬದುಕು ಸುಂದರ’, ಲೇಖಕಿ ಶ್ವೇತಾ ಗೌರಿಬಿದನೂರು ಅವರ ‘ಬಿಟ್ಟ ಜಾಗ ತುಂಬಿ’, ಶರಣು ಹುಲ್ಲೂರು ಅವರ ‘ಕನ್ನಡದ 100 ಸಿನಿಮಾಗಳು ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ’, ವಸಂತ್ ಗಿಳಿಯಾರ್ ಅವರ ‘ಲೈಫ್ ಇಸ್ ಜಿಂಗಲಾಲ’, ಜಗದೀಶ ಶರ್ಮಾ ಅವರ ‘ಜಸ್ಟ್ ಒಂದು ಗಂಟೆ ಸರಣಿ’ ಭಗವದ್ಗೀತೆ, ಚಾಣಕ್ಯ, ಕಲಿಸದೇ ಕಲಿಸುವ 24 ಗುರುಗಳು, ಆತ್ಮಗುಣ, ಯಕ್ಷಪ್ರಶ್ನೆ, ಧರ್ಮ ಕೃತಿಗಳನ್ನು ಬಿಡುಗಡೆಗೊಳಿಸಿದರು.

ನಟ ರಮೇಶ್ ಅರವಿಂದ್ ಮಾತನಾಡಿ, ‘ತಂತ್ರಜ್ಞಾನ ಬೆಳೆದಿದೆ ಬೆಳೆಯುತ್ತಿದೆ ಆದರೆ ಅಕ್ಷರ ಜ್ಞಾನ ಎಲ್ಲಿಯ ವರೆಗೆ ಬೆಳೆಯುತ್ತದೆಯೋ ಅಲ್ಲಿ ತನಕ ತಂತ್ರಜ್ಞಾನಗಳ ಹೊಸ ಆವಿಷ್ಕಾರಕ್ಕೆ ಯಾವುದೇ ಕೊರತೆ ಬರುವುದಿಲ್ಲ. ಅಕ್ಷರ ಎಂಬುದು ಮಹಾಕ್ರಾಂತಿಯಾಗಿದೆ ಎಂದು ಸಾವಣ್ಣ ಅಕ್ಷರ ಆರಾಧನೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಲೇಖಕ, ಪತ್ರಕರ್ತ ಜೋಗಿ, ಗಂಗಾವತಿ ಪ್ರಾಣೇಶ್, ವಿರೂಪಾಕ್ಷ ದೇವರಮನೆ, ರಂಗಸ್ವಾಮಿ ಮೂಕನಹಳ್ಳಿ, ಶ್ವೇತಾ, ಬಿ.ಸಿ, ಶರಣು ಹುಲ್ಲೂರು, ವಸಂತ್ ಗಿಳಿಯಾರ್, ಜಗದೀಶ ಶರ್ಮಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ