Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೌಕರರ ಭವನದಲ್ಲಿ ಶಿವಶರಣ ಹರಳಯ್ಯ ನಾಟಕ ಪ್ರದರ್ಶನ

 ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.23:
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ರಾತ್ರಿಿ ಶಿವಶರಣ ಹರಳಯ್ಯ ಎಂಬ ಸಾಮಾಜಿಕ ನಾಟಕವನ್ನು ಧಾತ್ರಿಿ ರಂಗಸಂಸ್ಥೆೆ ಕಲಾವಿದರು ಪ್ರದರ್ಶನ ಮಾಡಿದರು..
ನಾಟಕ ಕಾರ್ಯಕ್ರಮಕ್ಕೆೆ ಚಾಲನೆ ನೀಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಜಿ.ಮನೋಹರ ಮಾತನಾಡಿ, ನಿತ್ಯ ಮಾನಸಿಕ ಒತ್ತಡದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಮನರಂಜನೆಯ ಉದ್ದೇಶದಿಂದ ನಾಟಕ ಹಮ್ಮಿಿಕೊಳ್ಳಲಾಗಿದೆ. ಇದೇ ರೀತಿ ನಿರಂತರವಾಗಿ ಸರ್ಕಾರಿ ನೌಕರರ ಸಂಘ ಸಮಾಜಮುಖಿ ಕಾರ್ಯಕ್ರಮ ರೂಪಿಸುತ್ತದೆ ಎಂದರು.
ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಶರ್‌ೀ ಮಾತನಾಡಿ, ರಂಗಭೂಮಿ ಕಲೆ ಉಳಿಸಿ ಬೆಳೆಸಬೇಕಾಗಿದೆ. ಶಿವಶರಣ ಹರಳಯ್ಯ ನಾಟಕ ನಮ್ಮೆೆಲ್ಲರ ಬದುಕಿಗೆ ಸ್ಪೂರ್ತಿ ನೀಡಿತು ಎಂದು ತಿಳಿಸಿದರು.
ಪ್ರೌೌಢಶಾಲೆ ಸಹಶಿಕ್ಷಕರ ಸಂಘದ ಅಧ್ಯಕ್ಷ ತೌಡೂರು ಗುರುಮೂರ್ತಿ ಮಾತನಾಡಿ, ವಚನಕಾರ ಹರಳಯ್ಯ ಕುರಿತು ಇತಿಹಾಸದಲ್ಲಿ ದಾಖಲಾಗಿದ್ದ ಕಥೆ ತೆರೆಯ ಮೇಲೆ ನೋಡಿ ಮೈ ಜುಮ್ಮೆೆನಿಸುತ್ತದೆ. ಅವರ ಶ್ರೇೇಷ್ಠ ಭಕ್ತಿಿ ಬಸವಣ್ಣನನ್ನು ಮೆಚ್ಚಿಿಸಿದ ಬಗೆ ಮಾದರಿಯಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಶಿವಶರಣ ಹರಳಯ್ಯ, ಬಿಜ್ಜಳ ಹಡಪದ ಅಪ್ಪಣ್ಣ ಪಾತ್ರಗಳಲ್ಲಿ ವಿಜಯ್ ಕುಮಾರ್ ಸಿರಿಗೇರಿ, ಶೀಲವಮಯ. ಕೊಂಡಿ ಮಂಚಣ್ಣ ಪಾತ್ರಧಾರಿ ವಾಸು ಕುಣಿಗಲ್, ಪಂಡಿತರಾಗಿ ಮಾದಿಹಳ್ಳಿಿ ಸುಮಂಗಲ, ಕಲ್ಯಾಾಣಮ್ಮಳಾಗಿ ರಾಯಚೂರು ಸುಮಿತ್ರಾಾ, ಬಸವೇಶ್ವರನಾಗಿ ಕುಣಿಗಲ್ ದರ್ಶನ್, ಶವಲಿಂಗಿಯಾಗಿ ಕಿರಣಕುಮಾರ, ಮಧುವರಸನ ಪಾತ್ರದಲ್ಲಿ ಆದಿಶೇಷ, ಅಲ್ಲಮ ಪ್ರಭುವಾಗಿ ಬಿ.ಜಿ.ಹನುಮಂತು, ನೀಲಾಂಬಿಕೆಯಾಗಿ ಬಳ್ಳಾಾರಿ ಶ್ರೀಲತಾ ಅವರು ಪಾತ್ರಗಳಿಗೆ ಜೀವತುಂಬಿ ಮನೋಜ್ಞ ವಾಗಿ ಅಭಿನಯಿಸಿದರು. ಬೆಳಕು ಮತ್ತು ಸಂಗೀತ ನಾಗರಾಜ ಸಿರಿಗೆರೆ ನಿರ್ವಹಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್, ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಅಂಜಿನಪ್ಪ, ಕಾರ್ಯದರ್ಶಿ ಸೂರ್ಯನಾಯ್ಕ, ಗುರುನಾಥ, ಬಸವರಾಜ್, ಸಾವಿತ್ರಿಿ ಬಾಪುಲೆ ಸಂಘದ ಟಿ.ಎಚ್.ಎಂ.ಲತಾ, ಪಿ.ಸುಬ್ಬಣ್ಣ, ವೀರಪ್ಪ, ಎಲ್.ಎಚ್.ಗಿರೀಶ್, ಜಮಾಲುದ್ದೀನ್, ಕರಿಬಸಪ್ಪ, ಮಕಬುಲ್ ಬಾಷ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ