Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತೆರಿಗೆ ಹಣವೇ ಪಂಚಾಯತ್ ಅಭಿವೃದ್ಧಿಯ ಮೂಲ: ರತ್ನಮ್ಮ ಅಶ್ವತ್ಥಪ್ಪ

ಸುದ್ದಿಮೂಲ ವಾರ್ತೆ

ಆನೇಕಲ್, ಅ:14: ಜನರ ತೆರಿಗೆ ಮೂಲಕ ಕಟ್ಟುವ ಹಣವೇ ಸ್ಥಳೀಯ ಸರ್ಕಾರಗಳ ಅಭಿವೃದ್ಧಿಯ ಮೂಲವಾಗಿದೆ ಎಂದು ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರತ್ನಮ್ಮ ಅಶ್ವತಪ್ಪ ತಿಳಿಸಿದರು.

ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ತೆರಿಗೆ ವಸೂಲಾತಿ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಡ್ಲವಾಡಿ ಗ್ರಾಮ ಪಂಚಾಯಿತಿ ಸಂಪನ್ಮೂಲವಿಲ್ಲದ ಬಡಪಂಚಾಯಿತಿಯಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ತುಂಬಾ ತೊಂದರೆಯಾಗಿ ಸಂಪನ್ಮೂಲಕ್ಕೆ ಜನರ ಮೇಲೆ ಅವಲಂಬಿತವಾಗಬೇಕಾಗಿದೆ. ಇದನ್ನು ಅರಿತ ಪಂಚಾಯಿತಿಯು ಪ್ರತಿ ಹಳ್ಳಿಗಳಲ್ಲಿ ಜನರ ಬಳಿಗೆ ಹೋಗಿ ಕಂದಾಯವನ್ನು ವಸೂಲಾತಿ ಮಾಡಿ ಇದರಿಂದ ಆಗುವ ಪ್ರಯೋಜನಗಳನ್ನು ತಿಳಿಸಲಾಗುತ್ತಿದೆ ಎಂದು ತಿಳಿಸಿದರು.

ಇಂಡ್ಲವಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಆದೂರು ಪ್ರಕಾಶ್ ಮಾತನಾಡಿ, ಪಂಚಾಯಿತಿಯು ರಾಜಧಾನಿಯಿಂದ ಕೂಗಳತೆ ದೂರದಲ್ಲಿದ್ದರೂ ಕೂಡ, ಅನುದಾನದ ಕೊರತೆ ಎದುರಿಸುತ್ತಿದೆ. ಸರ್ಕಾರಗಳು ಇಂತಹ ಪಂಚಾಯತಿಯನ್ನು ಗುರುತಿಸಿ ಹೆಚ್ಚಿನ ಅನುದಾನವನ್ನು ನೀಡಿ ಸಹಕಾರವನ್ನು ನೀಡಬೇಕು. ಕೇವಲ ನೀರಿನ ತೆರಿಗೆ ಮನೆಗಳಿಗೆ ವಿಧಿಸುವ ಕಂದಾಯ ಮಾತ್ರ ಆದಾಯ ಮೂಲವಾಗಿದೆ. ಹಳ್ಳಿಗಳಲ್ಲಿ ಜನರು ತೆರಿಗೆ ಪಾವತಿಸಲು ಬರ ನಿರುದ್ಯೋಗ ಬಡತನವನ್ನು ನೆಪ ಹೇಳುತ್ತಿದ್ದಾರೆ ನೋವಿನಿಂದ ನುಡಿದರು.

ಪಂಚಾಯತಿ ಕಾರ್ಯದರ್ಶಿ ಅಂಬರೀಶ್ ಮಾತನಾಡಿ, ಗ್ರಾಮ ಪಂಚಾಯಿತಿ ಬಹುತೇಕ ಕಾಡಂಚಿನ ಗ್ರಾಮಗಳಾಗಿದ್ದು ಯಾವುದೇ ಮೂಲವಿಲ್ಲದೆ ಸೊರಗಿದೆ. ಇಂತಹ ಪಂಚಾಯತಿಗೆ ಜನರ ತೆರಿಗೆ ಬಹಳ ಮುಖ್ಯವಾಗಿದೆ ಇದನ್ನು ಅರಿತುಕೊಂಡು ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ತೆರಿಗೆಯನ್ನು ಕಟ್ಟಬೇಕು ಎಂದು ವಿನಂತಿಸಿಕೊಂಡರು.

ಕಾರ್ಯಕ್ರಮದಲ್ಲಿ ಮಾಜಿ ಉಪಾಧ್ಯಕ್ಷರಾದ ಎಲ್ ವಿ ಬಿ ವೆಂಕಟೇಶ್, ಪಂಚಾಯತಿ ಸದಸ್ಯರುಗಳಾದ ಪದ್ಮಮ್ಮ, ಮುತ್ತರಾಯಪ್ಪ, ನಾಗಮ್ಮ, ರಘು, ಕರ ವಸೂಲಿಗಾರರಾದ ಶ್ರೀನಿವಾಸ್, ಶಿವು, ವ್ಯಾಪಾರಿ ನಾರಾಯಣ, ಕಂಪ್ಯೂಟರ್ ಆಪರೇಟರ್ ಅಂಬರೀಶ್, ವಾಟರ್ ಮ್ಯಾನ್ ಗಳಾದ ಶಿವಣ್ಣ, ಲಿಂಗರಾಜು, ಗಣೇಶ್ ಸತೀಶ್, ಮಾದೇಶ್, ಮಾದಯ್ಯ, ಶಿವನಾಯಕ, ಮುನಿರಾಜು, ಕೇಶವ, ಅಶೋಕ್, ಸೋಮಶೇಖರ್, ಮುನಿರಾಜು, ವೆಂಕಟೇಶ್, ಕೋಮಲ, ಎಲ್ಲಮ್ಮ, ಮಂಜುಳಾ, ಸರಸ್ವತಮ್ಮ, ಭಾಗ್ಯಮ್ಮ, ಚೌಡಮ್ಮ ಇತರರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ