Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಂದಗುಡಿಯಲ್ಲಿ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬ!

ಸುದ್ದಿಮೂಲ ವಾರ್ತೆ

ಹೊಸಕೋಟೆ, ಆ.25: ತಾಲೂಕಿನ ನಂದಗುಡಿಯಲ್ಲಿ ಶ್ರಾವಣ ಮಾಸದ 2ನೇ ಶುಕ್ರವಾರ ವರಮಹಾಲಕ್ಷ್ಮೀ ವ್ರತವನ್ನು ಅರಾಧಿಸಲು ಶ್ರದ್ಧಾ ಭಕ್ತಿಯ ನಡುವೆ ನಂದಗುಡಿಯಲ್ಲಿ ಮಹಿಳೆಯರು ಹಬ್ಬವನ್ನು ಸಡಗರ ಸಂಭ್ರಮದ ನಡುವೆ ಆಚರಿಸಿದರು.

ವಿಶೇಷವಾಗಿ ಹೊಸ ಬೆಳ್ಳಿಚಂಬು, ಬಿಂದಿಗೆ, ತಟ್ಟೆ, ಚಿನ್ನಾಭರಣ, ನಗದು ಹಣ ಸೇರಿದಂತೆ ವಿವಿಧ ಅಲಂಕಾರಿಕ ಹೂಗಳಿಂದ ಸಿಂಗರಿಸಿದ್ದರು. ಕಳಸಕ್ಕೆ ಲಕ್ಷ್ಮೀದೇವಿಯ ಮುಖವಾಡ ಇಟ್ಟು, ಬಗೆ-ಬಗೆಯ ಹಣ್ಣುಗಳಿಂದ ಅಲಂಕರಿಸಿದ್ದರು.

ಹಲವು ಬಗೆಯ ತಿಂಡಿಗಳನ್ನು ದೇವಿಯ ಮುಂದಿಟ್ಟು ಶ್ರದ್ಧೆಯಿಂದ ಪೂಜೆ ನೆರೆವೇರಿಸಿ, ಧನ ಕನಕಾಧಿಗಳನ್ನು ಕರುಣಿಸುವಂತೆ ವಿನೀತರಾಗಿ ಬೇಡಿಕೊಳ್ಳುತ್ತಿರುವದು ಕಂಡು ಬಂದಿತ್ತು. ಶ್ರಾವಣ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಆಚರಣೆ ಪ್ರತಿ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು.

ಈ ಹಬ್ಬವನ್ನು ಮನೆಯ ಹೆಂಗಳೆಯರು ಮನೆಯಲ್ಲಿ ಸುಖ ಸಂತೋಷ ಸಮೃದ್ಧಿ ನೆಲೆಸಲೆಂದು ತಳಿರು ತೋರಣಗಳಿಂದ ಅಲಂಕೃತವಾದ ಪೀಠದಲ್ಲಿ ಲಕ್ಷ್ಮಿಯ ಕಳಸವಿಟ್ಟು, ವಿವಿಧ ಬಣ್ಣದ ಹೂಗಳು ಅಭರಣಗಳನ್ನು ತೊಡಿಸಿ, ವಿಧ ವಿಧದ ಅಲಂಕಾರಗಳಿಂದ ಶೃಂಗರಿಸಿ ಪೂಜಿಸಲಾಗುತ್ತದೆ.

ಮನೆಗಳಲ್ಲಿ ಲಕ್ಷ್ಮಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡುವುದರೊಂದಿಗೆ ನೆರೆ ಹೊರೆಯವರು, ನೆಂಟರಿಷ್ಠರ ಮಹಿಳೆಯರನ್ನು ಕುಂಕುಮಕ್ಕೆ ಅಹ್ವಾನಿಸುವುದರಲ್ಲಿ ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟು, ವಿಶೇಷವಾಗಿ ಬಗೆಬಗೆಯ ಸೀರೆಗಳನ್ನು ಧರಿಸಿ ಸಿಂಗಾರಗೊಂಡಿದ್ದರು. ವಿವಿಧ ದೇವತೆಗಳ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ನಾನಾ ಹೂಗಳಿಂದ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ