Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಿಕ್ಕಬಳ್ಳಾಪುರ ಸಹಿತ ವಿವಿಧೆಡೆ ರಾತ್ರಿ 10ರವರೆಗೂ ಮತದಾನ




ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 11- ಇವಿಎಂ ತಾಂತ್ರಿಕ ದೋಷ ಹಾಗೂ ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಧಾವಿಸಿದ್ದರಿಂದ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿ ವಿವಿಧೆಡೆ ರಾತ್ರಿ 10 ಗಂಟೆವೆರೆಗೆ ಮತದಾನ ಪ್ರಕ್ರಿಯೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ.85.35 ಮತದಾನವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ 2 ಮತಗಟ್ಟೆ ಹಾಗೂ ಗೌರಿಬಿದನೂರು ಕ್ಷೇತ್ರದ 8 ಮತಗಟ್ಟೆಗಳಲ್ಲಿ ರಾತ್ರಿ 10ವರೆಗೆ ಮತದಾನ ನಡೆದಿದ್ದು ಕಂಡುಬಂತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಜೆ ವೇಳೆಗೆ ಶೇ.88.9 ಮತದಾನ ನಡೆದಿದೆ‌ ಎಂದು ಜಿಲ್ಲಾಧಿಕಾರಿ ಎನ್.ಎಮ್. ನಾಗರಾಜ್ ಮಾಹಿತಿ ನೀಡಿದ್ದರು. ನಂತರ ಅಂತಿಮವಾಗಿ ಜಿಲ್ಲೆಯಲ್ಲಿ ಶೇ.85 ಮತದಾನ ದಾಖಲಾಗಿದೆ.

ಗೌರಿಬಿದನೂರು ಕ್ಷೇತ್ರ ಶೇ. 85.09, ಬಾಗೇಪಲ್ಲಿ ಶೇ. 85.38, ಚಿಕ್ಕಬಳ್ಳಾಪುರ‌ ಶೇ. 86.90, ಶಿಡ್ಲಘಟ್ಟ ಶೇ. 86.34, ಚಿಂತಾಮಣಿ‌ ಶೇ. 83.38 ಸೇರಿ ಜಿಲ್ಲೆಯಲ್ಲಿ ಶೇ.85.35 ಮತದಾನ ನಡೆದಿದೆ.

ನವಲಗುಂದದಲ್ಲಿ ಸಂಜೆ 6 ನಂತರವೂ ವೋಟಿಂಗ್ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ತಾಲೂಕು ಪಂಚಾಯತ್‌ ಕಾರ್ಯಾಲಯದಲ್ಲಿ ಸಂಜೆ 6 ಗಂಟೆ ನಂತರವೂ ಮತದಾನ ನಡೆಯಿತು. ಅದೇ ರೀತಿ ಇಲ್ಲಿನ ಗಣಪತಿ ದೇವಸ್ಥಾನದಲ್ಲಿ ಸಂಜೆ ವೇಳೆಗೆ ಸುಮಾರು 300ಕ್ಕೂ ಅಧಿಕ ಮತದಾರರು ಬಂದ ಪರಿಣಾಮ ಮತದಾನ ಸಂಜೆ 6 ಗಂಟೆಯ ನಂತರವೂ ನಡೆದಿದೆ.

ರಾಯಚೂರು  ಜಿಲ್ಲೆ ಲಿಂಗಸುಗೂರು ತಾಲೂಕಿನ ಕೋಠಾ ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ‌ಹೋದ ಮತದಾರರು ತಡವಾಗಿ ಮತಗಟ್ಟೆಗೆ ಆಗಮಿಸಿದ ಹಿನ್ನೆಲೆಯಲ್ಲಿ ರಾತ್ರಿ 9.30 ವರೆಗೆ ಮತದಾನ ನಡೆಯಿತು. ಸಂಜೆ 4.50 ಸುಮಾರಿಗೆ 400ಕ್ಕೂ ಹೆಚ್ಚು ಮತದಾರರು ಆಗಮಿಸಿದ್ದರಿಂದ ಎಲ್ಲರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಮತದಾನ ಮುಗಿಯುವಷ್ಟರಲ್ಲಿ ರಾತ್ರಿ 9.30 ಆಗಿತ್ತು.

ಶಿರಾ, ಚಿತ್ರದುರ್ಗದಲ್ಲಿ ಅವಧಿ ಮುಗಿದ ಬಳಿಕವೂ ಹಕ್ಕು ಚಲಾವಣೆ ತುಮಕೂರು ಜಿಲ್ಲೆಯ ಶಿರಾ ಹಾಗೂ ಚಿತ್ರದುರ್ಗದ ಕಬೀರನಂದ ಮತಗಟ್ಟೆ, ಗೌಡರ ಹಟ್ಟಿ ಮತಗಟ್ಟೆ, ಜಾಲಿಕಟ್ಟೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಿದ್ದರಿಂದ ಸಂಜೆಯ ನಂತರವೂ ಮತದಾನ ನಡೆಯಿತು. ಶಿರಾದಲ್ಲಿ 9 ಗಂಟೆ ನಂತರವೂ ಮತದಾನ ನಡೆದಿದ್ದು ಕಂಡುಬಂತು.






Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ