ಬೆಂಗಳೂರು,ಮೇ19: ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಾಲೂಕು ಮಟ್ಟದ ವಿಶ್ವ ಮಲೇರಿಯಾ ದಿನಾಚರಣೆ ಹಾಗೂ ಡೆಂಗ್ಯೂ ದಿನಾಚರಣೆಯನ್ನು ತಾಲೂಕಿನ ಸಮಸ್ತ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಹಾಗೂ ನಗರ ಆಶಾ ಕಾರ್ಯಕರ್ತೆಯರೊಂದಿಗೆ ಜಾಥಾ ಹಮ್ಮಿಕೊಂಡು, ಹೊಸಕೋಟೆ ನಗರ ಲಾರ್ವ ಸಮೀಕ್ಷೆ ಹಾಗೂ ನಿರ್ಮೂಲನ ಕಾರ್ಯಾಚರಣೆ ಮಾಡುವುದರೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು.
[video width="640" height="352" mp4="https://suddimoola.in/wp-content/uploads/2023/05/WhatsApp-Video-2023-05-19-at-12.49.36-PM.mp4"][/video]

ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ವೈದ್ಯರುಗಳಾದ ಡಾಕ್ಟರ್ ಶ್ರವಣ್ ಮತ್ತು ಡಾಕ್ಟರ್ ಶಮಿಲ್ ರವರು ತಾಲೂಕು ಪ್ರಭಾರ ಆರೋಗ್ಯ ಶಿಕ್ಷಣಾಧಿಕಾರಿ ರವಿಕುಮಾರ್ ರವರೊಂದಿಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಜಾಥಾಗೆ ಚಾಲನೆಯನ್ನು ನೀಡಿದರು.
ನಗರದ ಕೃಷ್ಣರಾಜೇಂದ್ರ ವೃತ್ತದ ಬಳಿ ಮಾನವ ಸರಪಳಿಯನ್ನು ನಿರ್ಮಿಸಿ , ಕೀಟಜನ್ಯ ರೋಗಗಳ ವಿರುದ್ಧ ಘೋಷಣೆ ಕೂಗಿ, ಸಾರ್ವಜನಿಕರಿಗೆ ಅರಿವು ಮೂಡಿಸಿದ್ದು ವಿಶೇಷವಾಗಿತ್ತು.